More

    ಅಲ್ಲಮಗೆ ಶುಭ ಕೋರಿದ ಖರ್ಗೆ

    ಕಲಬುರಗಿ: ದಕ್ಷಿಣ ಮತಕ್ಷೇತ್ರದಲ್ಲಿ ೨೧ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಸರಾಸರಿ ಶೇ.೫೪.೭೪ ಮತ ಗಳಿಕೆಯೊಂದಿಗೆ ಜಿಲ್ಲೆಯಲ್ಲಿ ಗಮನ ಸೆಳೆದಿರುವ ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ್ ಅವರಿಗೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಬೆನ್ನು ಚಪ್ಪರಿಸಿ ಶುಭ ಕೋರಿದ್ದಾರೆ.

    ಬೆಂಗಳೂರಿನ ಸದಾಶಿವ ನಗರಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಖರ್ಗೆಯವರನ್ನು ಗೌರವಿಸಲು ಮುಂದಾದಾಗ ತಾವೇ ಮುಂದಾಗಿ ಪಾಟೀಲರನ್ನು ಸತ್ಕರಿಸಿ ಶುಭ ಕೋರಿದರು. ಪಕ್ಷದ ಸಂಘಟನೆ ಕೆಲಸ ಮಾಡಿದ್ದರಿಂದ ಜನ ನಿಮಗೆ ಆಶೀರ್ವಾದ ಮಾಡಿದ್ದಾರೆ. ಸದಾ ಅವರ ಕೆಲಸಗಳನ್ನು ಮಾಡುತ್ತಿರುವ ನಿಮಗೆ ಒಳ್ಳೆಯದೇ ಆಗುತ್ತದೆ. ಆದರೆ ಅಧಿಕಾರ ಬರುತ್ತೆ ಹೋಗುತ್ತೆ. ನಿಮ್ಮನ್ನು ಬೆಂಬಲಿಸಿದ ಜನರನ್ನು ಮಾತ್ರ ಯಾವ ಕಾರಣಕ್ಕೂ ಮರೆಯಬಾರದು ಎಂದು ಖರ್ಗೆ ಕಿವಿಮಾತು ಹೇಳಿದರು.

    ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಸಹ ಶಾಸಕ ಅಲ್ಲಮಪ್ರಭು ಮತ್ತು ಬೆಂಬಲಿಗರು ಭೇಟಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts