More

    ಅಭಿಮಾನಿಗಳಿಂದ ಸಾಮಾಜಿಕ ಕಾರ್ಯವಾಗಲಿ

    ಕಾಗವಾಡ: ರಾಜಕೀಯ ನಾಯಕರ ಅಭಿಮಾನಿ ಬಳಗ ಸ್ಥಾಪನೆಗೊಂಡರೆ ಸಾಲದು, ಆ ಬಳಗದಿಂದ ಸಾಮಾಜಿಕ, ವಿಧಾಯಕ ಕಾರ್ಯಗಳು ಜರುಗಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

    ಕಾಗವಾಡ ಪಟ್ಟಣದಲ್ಲಿ ಲಕ್ಷ್ಮಣ ಸವದಿ ಅವರ ಅಭಿಮಾನಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ವೀರಮಾತಾ ಪುರಸ್ಕಾರ, ಆದರ್ಶಮಾತಾ, ಕರೊನಾ ಯೋಧರು ಹಾಗೂ ಪತ್ರಕರ್ತರ ಸತ್ಕಾರ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

    ಲಕ್ಷ್ಮಣ ಸವದಿ ಅಭಿಮಾನಿ ಬಳಗವು ಗಡಿಯಲ್ಲಿ ವೀರ ಮರಣ ಹೊಂದಿದ ಯೋಧರ ತಾಯಂದಿರಿಗೆ, ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ತಾಯಂದಿರಿಗೆ, ಕರೊನಾ ಸಮಯದಲ್ಲಿ ಜೀವದ ಹಂಗು ತೊರೆದು, ಜನರ ಪ್ರಾಣ ರಕ್ಷಣೆಗೆ ಹಗಲಿರುಳು ಶ್ರಮಿಸಿದ ವೈದ್ಯರಿಗೆ ಹಾಗೂ ನೈಜ ವರದಿಗಳನ್ನು ಪ್ರಕಟಿಸಿದ ಪತ್ರಕರ್ತರಿಗೆ ಸತ್ಕರಿಸಿ, ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ತಾಲೂಕಿನಲ್ಲಿರುವ ಪ್ರತಿಭಾವಂತ ಹಾಗೂ ಬಡ ಮಕ್ಕಳ ಶಾಲೆಯ ಖರ್ಚು-ವೆಚ್ಚಗಳನ್ನು ನಾವು ಭರಿಸಲು ಸಿದ್ದರಿದ್ದೇವೆ. ವಿದ್ಯಾರ್ಥಿಗಳು ಲಾಭ ಪಡೆಯಬೇಕುಎಂದು ಸಲಹೆ ನೀಡಿದರು.

    ವೀರಮರಣ ಹೊಂದಿದ 7 ಯೋಧರ ತಾಯಂದಿರಿಗೆ ವೀರಮಾತಾ ಪುರಸ್ಕಾರ, ಗಡಿಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿರುವ 65 ಯೋಧರ ತಾಯಂದಿರಿಗೆ ಆದರ್ಶಮಾತಾ ಪುರಸ್ಕಾರ, 11 ವೈದ್ಯರಿಗೆ ಕರೊನಾ ವಾರಿಯರ್ಸ್‌, 25 ಪತ್ರಕರ್ತರಿಗೆ ಸಮಾಜ ದರ್ಪಣ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 7 ಜನರಿಗೆ ಸಮಾಜ ರತ್ನ ಪುರಸ್ಕಾರ, ಪ್ರಶಸ್ತಿ ಪತ್ರ, ಲಕ ನೀಡಿ ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ರವೀಂದ್ರ ಪೂಜಾರಿ, ಎಲ್‌ಎಸ್ ಗ್ರೂಪ್ ಅಧ್ಯಕ್ಷ ಬಸವರಾಜ ಮಗದುಮ್ಮ, ಉಪಾಧ್ಯಕ್ಷ ಸಂಜಯ ಕರವ, ಕಾರ್ಯದರ್ಶಿ ಮಹೇಶಕುಮಾರ ಮಡಿವಾಳೆ, ಮಹಾವೀರ ಪಾಟೀಲ, ನೇಮಿನಾಥ ಚೌಗುಲೆ, ಪ್ರವೀಣ ಪಾಟೀಲ, ಜಿತು ಪಾಟೀಲ, ಸುನೀಲ ಕಿನಂಗೆ, ಸಂಜು ಪಿರಗಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts