ಚಿತ್ರದುರ್ಗ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಂಗ್ರಹಣೆ , ಸರಬರಾಜು, ಮಾರಾಟ ತಡೆಗಾಗಿ ಅಬಕಾರಿ ಇಲಾಖೆ ಜಿಲ್ಲಾದ್ಯಂತ 9 ಫ್ಲೈಯಿಂಗ್ ಸ್ಕ್ವಾಡ್ಗಳನ್ನು ರಚಿಸಿದೆ.
ಇವುಗಳೊಂದಿಗೆ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಪ್ರದೇಶಗಳಾದ ಹಿರಿಯೂರು ತಾಲೂಕು ಮದ್ದಿಹಳ್ಳಿ, ಚಳ್ಳಕೆರೆ ತಾಲೂಕಿನ ದೊಡ್ಡಬಾದಿಹಳ್ಳಿ, ಮೊಳಕಾಲ್ಮೂರು ತಾಲೂಕು ಎದ್ದಲಬೊಮ್ಮನಹಟ್ಟಿಯಲ್ಲಿ ಅಬಕಾರಿ ತನಿಖಾ ಠಾಣೆ ಸ್ಥಾಪಿಸಲಾಗಿದೆ ಎಂದು ಚಿತ್ರದುರ್ಗ ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ತಿಳಿಸಿದ್ದಾರೆ.
ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ ಹಾಗೂ ಹಂಚುವುದು ಕಂಡುಬಂದರೆ ಇವರಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಅಬಕಾರಿ ಉಪ ಅಧೀಕ್ಷಕ ರಾಜೇಂದ್ರ ಐ ಉಗಾರ್ (9449629510,08194-230668), ವಲಯ ಅಬಕಾರಿ ನಿರೀಕ್ಷಕ ಶೇಖ್ಇಮ್ರಾನ್ (08194-231393,9482088555), ಹೊಳಲ್ಕೆರೆ ವಲಯ ಅಬಕಾರಿ ನಿರೀಕ್ಷಕಿ ಎಚ್.ಸವಿತಾ (08191-275902,9663527579), ಹೊಸದುರ್ಗ ವಲಯ ಅಬಕಾರಿ ಉಪ ನಿರೀಕ್ಷಕ ಎಂ.ಭೂಪತಿ (08199-200575,9036645736), ಹಿರಿಯೂರು ಉಪ ವಿಭಾಗ ಉಪ ಅಧೀಕ್ಷಕ ಕೆ.ಟಿ.ಧರ್ಮಪ್ಪ (08193-271730, 9481178474)
ಚಳ್ಳಕೆರೆ ವಲಯ ಅಬಕಾರಿ ನಿರೀಕ್ಷಕ ಸಿ.ನಾಗರಾಜ್ (08195-251258,9611976385), ಹಿರಿಯೂರು ವಲಯ ನಿರೀಕ್ಷಕಿ ಭಾರತಮ್ಮ (08193-271733,8660075704), ಮೊಳಕಾಲ್ಮೂರು ವಲಯ ನಿರೀಕ್ಷಕ ಎಸ್.ರಮೇಶ್ (08198-229750) ಹಾಗೂ ಚಿತ್ರದುರ್ಗ ಅಬಕಾರಿ ಉಪ ಆಯುಕ್ತರ ಕಚೇರಿ ಅಬಕಾರಿ ನಿರೀಕ್ಷಕ ಎಂ.ಆರ್.ಸೋಮಶೇಖರ್ (9663397015) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.