ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ನಗರದಲ್ಲಿ ಅನಾಥ ಮಕ್ಕಳು ಮತ್ತು ವಯೋವೃದ್ಧರಿಗೆ ಉಣ್ಣೆಯ ಸ್ವೆಟರ್ ಮತ್ತು ಕ್ಯಾಪ್ಗಳನ್ನು ಭಾನುವಾರ ವಿತರಿಸಲಾಯಿತು.
ಕ್ಲಬ್ ಅಧ್ಯಕ್ಷ ಜಿತೇಶ ಪಾಂಚಾಲ್, ಕಾರ್ಯದರ್ಶಿ ಮೋಹಿತ್ ದಂಡ್ ನೇತೃತ್ವದ ತಂಡ 45 ಹುಡುಗರು, 15 ಹುಡುಗಿಯರು ಮತ್ತು 20 ಹಿರಿಯರಿಗೆ ಸ್ವೆಟರ್ ಮತ್ತು ಕ್ಯಾಪ್ಗಳನ್ನು ವಿತರಿಸಲಾಯಿತು. ವಾಸುದೇವ ಪಾಟೀಲ, ಅಶ್ವಿನ್ ಗುಡಿಸಾಗರ ಅವರು ವಿದ್ಯಾರ್ಥಿಗಳಿಗೆ ಬಿಸ್ಕತ್ ಹಾಗೂ ಚಾಕೋಲೆಟ್ ವಿತರಿಸಿದರು.
ಹಿರಿಯ ರೊಟೇರಿಯನ್ಗಳಾದ ಗಿರೀಶ ಉಪಾಧ್ಯಾಯ, ಸುರೇಂದ್ರ ಪೋರ್ವಾಲ್, ಲಲಿತಾ ಚೌಹಾಣ, ಅಮಿತ ಜೈನ್ ಇತರರು ಉಪಸ್ಥಿತರಿದ್ದರು. 60 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಕೊಠಡಿ ನಿರ್ವಿುಸಿಕೊಡುವುದಾಗಿ ಕ್ಲಬ್ನ ಪದಾಧಿಕಾರಿಗಳು ಭರವಸೆ ನೀಡಿದರು.