More

    ಅತ್ಯಚಾರ ಆರೋಪಿ ಬಂಧನ

    ಹಳಿಯಾಳ: ಬಾಲಕಿಯನ್ನು ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಲು ಕಾರಣನಾದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಕುರಿತು ಇಲ್ಲಿ ಠಾಣೆಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿಪಿಐ ಬಿ.ಎಸ್.ಲೋಕಾಪುರ, ಇನ್ನೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದರು. ಬೆಳವಟಗಿ ಗ್ರಾಮದ ನಿವಾಸಿ ಮಂಜುನಾಥ ಸುರೇಶ ಪರಸೋಜಿ ಬಂಧಿತ ಆರೋಪಿಯಾಗಿದ್ದು, ಈತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದಿದ್ದಾರೆ. ಈತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿದ ಕೆಲ ದಿನಗಳ ನಂತರ ಮಹಾರಾಷ್ಟ್ರಕ್ಕೆ ಗೌಂಡಿ ಕೆಲಸಕ್ಕಾಗಿ ಹೋಗಿದ್ದ. ಈ ನಡುವೆ ಆಕೆ ಮತ್ತೊಬ್ಬನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ಆರೋಪಿಗೆ ತಿಳಿಸಿದ್ದಳು. ಈಗ ಆ ವ್ಯಕ್ತಿಗಾಗಿ ಶೋಧ ನಡೆದಿದೆ. ಮೃತ ಬಾಲಕಿಯ ಸಂಬಂಧಿಯ ದೂರಿನ ಮೇರೆಗೆ ನನ್ನ ನೇತೃತ್ವದಲ್ಲಿ, ಪಿಎಸ್​ಐ ಯಲ್ಲಾಲಿಂಗ ಕೊಣ್ಣೂರ, ಕ್ರೈಮ್ ಪಿ.ಎಸ್.ಐ ರಾಜಕುಮಾರ, ಸಿಬ್ಬಂದಿ ಪರಶುರಾಮ ಸೊಲ್ಲಾಪುರಿ, ಪ್ರಕಾಶ ಮೂಳೆ, ರಾಜೇಶ ನಾಯಕ, ಅಶೋಕ ಹುಬ್ಬಳ್ಳಿ, ಎಂ.ಎಂ.ಮುಲ್ಲಾ, ಜಗದೀಶ ಕುಂಬಾರ, ಗುರುರಾಜ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.

    ಮೃತ ಪಟ್ಟ ಬಾಲಕಿ: ಗರ್ಭಿಣಿಯಾದ ಬಾಲಕಿಯು ಕಳೆದ ಮಾರ್ಚ್ 9 ರಂದು ಅಡುಗೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮೈಗೆ ಬೆಂಕಿ ತಗುಲಿ ಕೊಂಡಿದ್ದಳು. ಈ ವೇಳೆ ಆಕೆಯನ್ನು ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯಲ್ಲಿ ಆಕೆ ಅವದಿಪೂರ್ಣ ನಿರ್ಜಿವ ಭ್ರೂಣಕ್ಕೆ ಜನ್ಮ ನೀಡಿದ್ದಳು. ನಂತರ ಅವಳನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ. 16ರಂದು ಮೃತಪಟ್ಟಿದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts