More

    ಅಂಬೇಡ್ಕರ್ ಕೊಡುಗೆ ಅಪಾರ

    ಚಿತ್ರದುರ್ಗ: ಭಾರತಕ್ಕೆ ಸುಭದ್ರ ಸಂವಿಧಾನ ನೀಡಿದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಬಿ.ಟಿ.ಜಗದೀಶ್ ಹೇಳಿದರು.

    ಸಂಘದ ಕಚೇರಿಯಲ್ಲಿ ನಡೆದ ಪರಿನಿಬ್ಬಾಣ ದಿನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಬುದ್ದನ ಅಹಿಂಸಾ ಮಾರ್ಗ, ಅಸಮಾನತೆ ವಿರುದ್ಧದ ಬಸವಣ್ಣನ ಹೋರಾಟ, ಸಮ ಸಮಾಜಕ್ಕಾಗಿ ಕೀರ್ತನೆಗಳ ಮೂಲಕ ಸಂದೇಶ ಸಾರಿದ ಕನಕದಾಸರ ತತ್ವ, ಸರ್ವರೂ ಸಮಾನರಾಗಿ ಬದುಕಲು ಸಂವಿಧಾನ ರಚಿಸಿದ ಅಂಬೇಡ್ಕರ್ ಕೊಡುಗೆ ಎಂದಿಗೂ ಮರೆಯುವಂತಿಲ್ಲ ಎಂದು ಬಣ್ಣಿಸಿದರು.

    ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ತುಳಿತಕ್ಕೆ ಒಳಗಾದವರ ಧ್ವನಿಯಾಗಿ ನಿಂತ ಅಂಬೇಡ್ಕರ್ ಅವಿಸ್ಮರಣೀಯರಾಗಿದ್ದಾರೆ. ಆದರೆ, ಅವರು ರಚಿಸಿದ ಸಂವಿಧಾನದ ಆಶಯಗಳು ಇಂದಿಗೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಈ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕಾಂತರಾಜ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಡಿ. 12 ರಂದು ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

    ಸಂಘದ ಅಧ್ಯಕ್ಷ ಶ್ರೀರಾಮ್, ಗೌರವಾಧ್ಯಕ್ಷ ಎಚ್.ಮಂಜಪ್ಪ, ಖಜಾಂಚಿ ಮುತ್ತು, ಮುಖಂಡರಾದ ಮಾಳೇಶ್, ದೇವಣ್ಣ, ಪ್ರಭಣ್ಣ, ಗ್ರಾಪಂ ಸದಸ್ಯ ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts