ದಶಮ ಗುರುವು ಜೂನ್ 29ರಂದು ತನ್ನ ರಾಶಿಯಾದ ಒಂಬತ್ತನೇ ಮನೆ ಸೇರಲಿದ್ದಾನೆ. ವಕ್ರೀ ಗುರುವಿದ್ದರೂ, ಒಂಬತ್ತನೇ ಮನೆಯ ವಿಶೇಷ ಫಲವನ್ನು ನೀಡುತ್ತಾನೆ. ದ್ವಾದಶದಲ್ಲಿ ಅಂಗಾರಕನು ಕೆಲಸದಲ್ಲಿ ಒತ್ತಡವನ್ನು ತಂದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾನೆ. ದುಡ್ಡಿನ ಅವಶ್ಯಕತೆ ಎಲ್ಲರಿಗೂ ಇರುತ್ತದೆ. ಆದರೆ ಆರೋಗ್ಯವಿದ್ದರೆ ಆನಂದಿಸಬಹುದು. ನವಗ್ರಹಾರಾಧನೆ ಮಾಡಿರಿ.
ಅಷ್ಟಮದಲ್ಲಿ ಗುರು ಬರುವುದರಿಂದ ಕೆಲಸವು ನಿಧಾನಿಸುತ್ತದೆ. ಯೋಚಿಸಿ ಮುನ್ನಡೆಯಿರಿ. ಬ್ರಹ್ಮನ ಪತ್ನಿ ಸರಸ್ವತಿಯನ್ನು ಆರಾಧಿಸಿ. ಗುರುಪರಂಪರಾ ಸ್ತೋತ್ರವನ್ನು ಪಠಿಸಿ. ಅಂದುಕೊಂಡ ಕೆಲಸಗಳು ಶೇಕಡ 50ಭಾಗ ಸಾಗುತ್ತದೆ. ಕಡಲೆಕಾಳನ್ನು ದಕ್ಷಿಣಾಮೂರ್ತಿಗೆ ನೈವೇದ್ಯ ಮಾಡಿ. ಇದೇ ಪರಿಹಾರ ಐದು ತಿಂಗಳಕಾಲ ಮುಂದುವರಿಸಿ. ಶುಭವಾಗುತ್ತದೆ.
ಈಗ ತಾನೆ ಮೃಗಶಿರ, ಆರಿದ್ರ ನಕ್ಷತ್ರ ಸಂಧಿಕಾಲದ ಗ್ರಹಣವನ್ನು ನೋಡಿದ್ದೀರ. ಗುರುವು ಸಪ್ತಮದಲ್ಲಿ ಬರುವುದ ರಿಂದ ಸ್ವಲ್ಪಕಾಲ ಕ್ಷೇಮವನ್ನು ಕೊಡುತ್ತಾನೆ. ಅಷ್ಟಮ ಶನಿಯು ಗೃಹದಲ್ಲಿ ಬಾಧೆಯನ್ನು ಖಿನ್ನತೆಯನ್ನು ತರುತ್ತಾನೆ. ಈಶ್ವರ ಆರಾಧನೆ ನಿಮ್ಮನ್ನು ಕಾಯುತ್ತದೆ. ಗ್ರಹಣ ಕಾಲದ ನಿಮ್ಮ ಶ್ರದ್ಧಾ-ಭಕ್ತಿ ನಿಸ್ವಾರ್ಥ ಪ್ರಾರ್ಥನೆ ಕಾಪಾಡುತ್ತದೆ.
ಹನ್ನೆರಡನೆಯ ಮನೆಯಲ್ಲಿ ಆದ ಗ್ರಹಣವು, ನಿಮಗೆ ಆಲಸ್ಯವನ್ನು ಉಂಟುಮಾಡಿ ಸಮಯವನ್ನು ಹಾಳುಮಾಡುತ್ತದೆ. ಅಧಿಪತಿಯಾದ ಚಂದ್ರ ಗ್ರಹವನ್ನು ಪೂಜಿಸಿ, ಉಮಾಮಹೇಶ್ವರನನ್ನು ಆರಾಧನೆ ಮಾಡಿ. ಕೈಗೊಂಡ ಕೆಲಸಗಳು ತೃಪ್ತಿಯನ್ನು ಕೊಡುತ್ತವೆ. ಕಾಲಿಗೆ ಪೆಟ್ಟು ಬೀಳಬಹುದು. ಎಚ್ಚರವಹಿಸಿ. ಶಿವಪಂಚಾಕ್ಷರಿಯನ್ನು ಜಪಿಸಿ.
ಬಹಳಕಾಲದಿಂದ ಪಂಚಮ ಶನಿಯ ಆರ್ಭಟವನ್ನು, ಆಗುವ ಕೆಲಸಗಳಿಗೆ ತಡೆಯನ್ನು, ಇನ್ನುಳಿದ ಗ್ರಹವು ತಂದೊಡ್ಡಿದ ತೊಂದರೆ ಸರಿದು ಶನಿಯು ಷಷ್ಠದಲ್ಲಿದ್ದು ನಿಭಾಯಿಸುತ್ತಾನೆ. ಪಂಚಮ ಗುರುವು ಧನ, ಸುಖ, ಪ್ರೀತಿ, ಕೀರ್ತಿ, ಜಯ, ಲಾಭವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. ಆದರೆ ನಿತ್ಯವೂ ಮಖಾ ನಕ್ಷತ್ರದ ಅಧಿಪತಿ ಸುಬ್ರಹ್ಮಣ್ಯನನ್ನು ಪೂಜಿಸಿ. ದತ್ತಾತ್ರೇಯನನ್ನು ಹೃದಯ ಮಂದಿರದಲ್ಲಿಟ್ಟು ಆರಾಧಿಸಿ.
ಪಂಚಮ ಶನಿ ನಿಮ್ಮ ಸತ್ಯವನ್ನು ಪರೀಕ್ಷೆ ಮಾಡಲು ಕಾಯುತ್ತಿದ್ದಾನೆ. ಸತ್ಯವನ್ನು, ನ್ಯಾಯಮಾರ್ಗವನ್ನು ಅನುಸರಿಸಿ, ಪೊಳ್ಳು-ಸುಳ್ಳು ವಿಚಾರಗಳಿಗೆ ತಡೆ ನೀಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಮಾಡಿದ ಪಾಪವನ್ನು ದೇವರ ಮುಂದೆ ಪ್ರಕಟಿಸಿ ನಾರಾಯಣನಲ್ಲಿ ಕ್ಷಮೆಯಾಚಿಸಿ. ಇದ್ದುದ್ದಕ್ಕೆ ತೃಪ್ತಿಪಡಿ. ಅನ್ಯರ ಮನಸ್ಸನ್ನು ನೋಯಿಸದಿರಿ. ತಾಮ್ರ ಪಾತ್ರೆಯಲ್ಲಿ ಜಲವನ್ನು, ಚಣಕದಳವನ್ನು ದಾನ ಮಾಡಿ. ಒಳ್ಳೆಯ ಕಾಲ ನಿರೀಕ್ಷಿಸಿ.
ಚತುರ್ಥದಲ್ಲಿ ಶನಿ, ತೃತೀಯ ಗುರು ಉತ್ತುಂಗಕ್ಕೆ ಕೊಂಡೊಯ್ಯುವುದಿಲ್ಲ. ಸೋಲನ್ನು ತರುವುದಿಲ್ಲ. ಪಾರ್ವತಿ ಸಮೇತ ಶ್ರೀ ಸದಾಶಿವನನ್ನು ಅರ್ಚಿಸಿ, ಧೈರ್ಯದಿಂದ ಮುನ್ನುಗ್ಗಿ. ದೇವಿಯೇ ನಿಮ್ಮನ್ನು ನಡೆಸಿ ಶುಭ ಫಲಗಳನ್ನು ತರುತ್ತಾಳೆ. ಅವರೇಬೇಳೆಯನ್ನು ದಾನ ಮಾಡಿ. ಈ ವಾರದಲ್ಲಿ ಮನೆಗೆ ಯಾರೇ ಬಂದರೂ ಅನ್ನಪ್ರಸಾದವನ್ನು ನೀಡಿ ಸತ್ಕರಿಸಿ. ನಿಮಗೆ ಶುಭ ತರುತ್ತದೆ.
ಕಾಲಾಯ ತಸ್ಮೈ ನಮಃ. ಒಳ್ಳೆಯ ಕಾಲ ಜೂನ್ 29ರಿಂದ (ನಾಳೆ) ಆರಂಭವಾಗಲಿದೆ. ನಿರೀಕ್ಷೆಯಲ್ಲಿದ್ದ ಬಹುಧನವು ನಿಮ್ಮ ಕೈಗೆ ಬಂದು ಸೇರಲಿದೆ. ಆತುರ ಪಡಬೇಡಿ. ರಾಶ್ಯಾಧಿಪತಿ ಷಣ್ಮುಖನನ್ನು ಪ್ರಾರ್ಥಿಸಿ. ತೊಗರಿಬೇಳೆ ದಾನ ಕೊಡಿ. ವಿಶೇಷ ಪರಿವರ್ತನಾ ಕಾಲಕ್ಕೆ ಒಂದು ಯಾಮ ಮಾತ್ರ ಬಾಕಿ ಇದೆ. ಸಾಹಸವಿರಲಿ. ಧೈರ್ಯವಿರಲಿ. ದುರ್ಗೆಯ ಪ್ರಾರ್ಥನೆ ಇರಲಿ. ಶ್ರೀ ಲಕ್ಷ್ಮೀ ಚಂದ್ರಲಾಂಬ (ಸನ್ನತಿ) ಸ್ತೋತ್ರವನ್ನು ಪಠಿಸಿ.
ಸ್ವಕ್ಷೇತ್ರದಲ್ಲಿ ಗುರು ಬಂದು ಸೇರಿ, ಮಕರ ಶನಿಯು ನಿಮ್ಮ ಅವಘಡಗಳನ್ನು ತಿದ್ದಿ ನಿಮಗೆ ಮಾನವನ ಬೆಲೆಯನ್ನು ತಿಳಿಸಿಕೊಟ್ಟು, ಕೈಹಿಡಿದು ಕರೆದುಕೊಂಡು ಹೋಗುತ್ತಾನೆ. ಅಂತ್ಯಭಾಗದ ಸಾಡೇಸಾತಿಯು ನಿಮ್ಮನ್ನು ಹೊಸ ಮನುಷ್ಯನನ್ನಾಗಿ ಮಾಡಿ ಮಹತ್ಕಾರ್ಯ ಸಾಧನೆಗಾಗಿ ಮುನ್ನಡೆಸುತ್ತಾನೆ. ಆಹಾರ ಮಿತವಾಗಿರಲಿ. ಮಾತು ಮುತ್ತಾಗಿರಲಿ. ಸಹನೆ ನಿಮ್ಮ ಜಯದ ಗುರಿ.
ಗ್ರಹಣ ಭಾಗದ ಫಲದಿಂದ ಶುಭವಿದ್ದರೂ ಜನ್ಮಶನಿ ಸಮಸ್ಯೆಯನ್ನು ತಂದೊಡ್ಡುತ್ತಾನೆ. ಆದರೆ ಹೆದರಬೇಕಾ ಗಿಲ್ಲ. ಬಂದದ್ದೆಲ್ಲ ಬರಲಿ-ಗೋವಿಂದನ ದಯೆ ಇರಲಿ. ಲಕ್ಷ್ಮೀಸಹಿತ ಅನಂತಪದ್ಮನಾಭನ ಕಥಾಶ್ರವಣ ಮಾಡಿ. ಅಷ್ಟೋತ್ತರ ಶತನಾಮ ಮಾಡಿ. ಗೋಧಿ-ಬೆಲ್ಲ ದಾನ ನೀಡಿ. ದೇವರು ಯಾವಾಗಲೂ ದಯಾಮಯನು. ನಿಮಗೆ ತಾಳ್ಮೆ ಇದ್ದಲ್ಲಿ ಸುದಿನಗಳು ಬಂದೇ ಬರುತ್ತವೆ. ನಿಮ್ಮ ಕುಲಗುರುಗಳನ್ನು ಧ್ಯಾನಿಸಿ, ಪೂಜಿಸಿ, ಸಂದರ್ಶಿಸಿ.
ಹನ್ನೆರಡರ ಶನಿ ನಿಮಗೆ ತಾಪ, ಹಿಂದೆ ಮಾಡಿದ ಪಾಪ ಎಲ್ಲವನ್ನೂ ತೋರುತ್ತಿದ್ದಾನೆ. ಇದು ನಿಮ್ಮನ್ನು ಪರಿಪೂರ್ಣ ಮನುಷ್ಯನನ್ನಾಗಿ ಮಾಡಲು ನಿಮ್ಮನ್ನು ತಿದ್ದಿ, ದಾರಿ ತೋರಿಸಿ, ಮುಂದಿನ ದಿನಗಳಲ್ಲಿ ಲಾಭದ ಕಡೆಗೆ ಕೊಂಡೊಯ್ಯುತ್ತಾನೆ. ಅಂದಾಜಿನ ಲೆಕ್ಕದಲ್ಲಿ ಜೀವನವನ್ನು ಮಾಡಬೇಡಿ. ಪರಿಪೂರ್ಣತೆ, ದೈವಭಕ್ತಿ ಎರಡೇ ನಿಮ್ಮ ಬಾಳಿನ ಗುಟ್ಟು. ಶಿವನ ದಾರಿದ್ರ್ಯದಹನ ಸ್ತೋತ್ರವನ್ನು ಪಠಿಸಿ. ಶುಭವಾಗುತ್ತದೆ.
ಹಸಿದವನಿಗೆ ಒಂದು ಊಟವೇ ಮೃಷ್ಟಾನ್ನವಾಗು ತ್ತದೆ. ನಿತ್ಯವೂ ಮೃಷ್ಟಾನ್ನ ಉಂಡವನಿಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಹಾಗೆಯೇ ಒಳ್ಳೆಯ ಕಾಲವನ್ನು ಸದುಪಯೋಗ ಪಡಿಸಿಕೊಂಡು ಅದರ ಫಲ ಪಡೆಯಿರಿ. ಒಂದು ಮೂಟೆಯ ಅಕ್ಕಿಯಿದ್ದರೂ ತಿನ್ನುವುದು ಒಂದು ಮುಷ್ಟಿ. ಮೂಟೆಯಲ್ಲಿರುವ ಅಕ್ಕಿ ದೇವರ ಸೇರುವಾಗ ಮಂತ್ರಾಕ್ಷತೆಯಾಗುತ್ತದೆ. ದೇವರ ಧ್ಯಾನದಲ್ಲಿ ಸುಖವಿದೆ. ||ಹಂ ಹನುಮತೇ ನಮಃ|| ಬೀಜಾಕ್ಷರವನ್ನು ಪಠಿಸಿ.