More

    ಜಲ, ಮೃತ್ತಿಕೆ ರವಾನೆ

    ಮೈಸೂರು: ಆಯೋಧ್ಯೆಯಲ್ಲಿ ಶ್ರೀರಾಮಂದಿರ ನಿರ್ಮಾಣಕ್ಕೆ ಆ.5ರಂದು ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮಕ್ಕೆ ನಗರದಿಂದ ಶನಿವಾರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪುಣ್ಯ ನದಿಗಳ ಜಲ ಹಾಗೂ ಪುಣ್ಯ ಕ್ಷೇತ್ರಗಳ ಮೃತ್ತಿಕೆಯನ್ನು ಕಳುಹಿಸಿಕೊಡಲಾಯಿತು.

    ಸುತ್ತೂರು ಶ್ರೀ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಮಂಗಳಾರತಿ ಹಾಗೂ ಪುಷ್ಪಾರ್ಷನೆ ಮಾಡಿದ ಕಾವೇರಿ, ಕಪಿಲಾ ಮಾತೆಯ ತೀರ್ಥ ಹಾಗೂ ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಮೃತ್ತಿಕೆಯನ್ನು ವಿಶ್ವ ಹಿಂದು ಪರಿಷತ್ ಮೂಲಕ ಅಯೋಧ್ಯೆಗೆ ಕಳುಹಿಸಿಕೊಡಲಾಯಿತು.

    ಶಾಸಕ ರಾಮದಾಸ್ ಮಾತನಾಡಿ, ನನ್ನ ತಾಯಿ ಮನೆಯಲ್ಲಿ 60 ವರ್ಷ ಶ್ರೀರಾಮನ ಪೂಜೆ ಮಾಡುತ್ತಾ ಪ್ರತಿದಿನ ಹುಂಡಿಗೆ ಹಣ ಹಾಕುತ್ತಿದ್ದರು. ಈ ರೀತಿ ಸಂಗ್ರಹವಾದ ಒಟ್ಟು 7,80,216 ರೂ. ಗಳನ್ನು ರಾಮಮಂದಿರ ನಿರ್ಮಾಣ ಸಂದರ್ಭ ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts