ಲಖನೌ: ಅಂದು ಕಾನ್ಪುರದಲ್ಲಿ ಎಂಟು ಪೊಲೀಸ್ರನ್ನು ವಿಕಾಸ್ ದುಬೆ ಹತ್ಯೆ ಮಾಡಿದಾಗ, ಆತನ ತಾಯಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.
ನನ್ನ ಮಗ ಮಾಡಿದ್ದು ಅಪರಾಧ. ಒಂದೊಮ್ಮೆ ಅವನು ಶರಣಾಗದೆ ಇದ್ದರೆ ಕೊಂದುಬಿಡಿ ಎಂದು ಪೊಲೀಸರಿಗೆ ಹೇಳಿದ್ದರು.
ಇದೀಗ ಅವರ ಎರಡನೇ ಮಗ, ವಿಕಾಸ್ ದುಬೆ ಸೋದರ ದೀಪ್ ಪ್ರಕಾಶ್ ದುಬೆ ತಲೆ ಮರೆಸಿಕೊಂಡಿದ್ದಾನೆ. ತನ್ನ ಅಣ್ಣನ ಅಕ್ರಮಗಳಲ್ಲಿ ಆತನ ಪಾಲೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ದೀಪ್ ಪ್ರಕಾಶ್ ದುಬೆ ತಲೆಗೆ ಉತ್ತರ ಪ್ರದೇಶ ಸರ್ಕಾರ 20 ಸಾವಿರ ರೂ.ಘೋಷಿಸಿದೆ.
ಇದೀಗ ಮತ್ತೆ ತಾಯಿ ಸರಳಾ ದೇವಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಿರಿಯ ಮಗನ ಬಳಿ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: PHOTOS: ನಟ ಜೈ ಜಗದೀಶ್ ಪುತ್ರಿ ವೈಭವಿ ಮಾದಕ ಫೋಟೋಶೂಟ್
ದೀಪ್ ಪ್ರಕಾಶ್ ದುಬೆ ಶರಣಾಗದಿದ್ದರೆ ವಿಕಾಸ್ ದುಬೆಗೆ ಎದುರಾದ ಪರಿಸ್ಥಿತಿಯೇ ಅವನಿಗೂ ಬರುತ್ತದೆ. ಹಾಗಾಗಿ ಎಲ್ಲಿದ್ದರೂ ಬಂದು ಶರಣಾಗು ಎಂದು ಹೇಳಿದ್ದಾರೆ.
ದೀಪ್ ಪ್ರಕಾಶ್ ದಯವಿಟ್ಟು ಬಂದು ಶರಣಾಗು. ಇಲ್ಲದಿದ್ದರೆ ಪೊಲೀಸರು ನಿನ್ನ ಮತ್ತು ನಿನ್ನ ಕುಟುಂಬವನ್ನು ಕೊಲ್ಲುತ್ತಾರೆ. ಶರಣಾದರೆ ಪೊಲೀಸರು ರಕ್ಷಣೆ ಕೊಡುತ್ತಾರೆ. ನೀನೇನೂ ಮಾಡಿಲ್ಲ ಎನ್ನುವುದು ನನಗೆ ಗೊತ್ತು. ವಿಕಾಸ್ ದುಬೆಯ ತಮ್ಮ ಎಂಬ ಒಂದೇ ಕಾರಣಕ್ಕೆ ನೀನು ಅಡಗಿದ್ದೀಯಾ ಎಂಬುದು ನನಗೆ ತಿಳಿದಿದೆ ಎಂದು ಸರಳಾದೇವಿ ಹೇಳಿದ್ದಾರೆ. (ಏಜೆನ್ಸೀಸ್)
ರಾಮ ರಾಜ್ಯ ಸ್ಥಾಪನೆಯ ಭರವಸೆ ನೀಡಿ ಗೂಂಡಾ ರಾಜ್ಯ ನಿರ್ಮಾಣ ಮಾಡಿದ್ದಾರೆ…: ರಾಹುಲ್ ಗಾಂಧಿ