ವಿಜಯಪುರ: ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರ ಆಜ್ಞಾನುಸಾರ ಧನುರ್ಮಾಸ ಆಚರಣೆ ಡಿ. 16 ರಿಂದ ಆರಂಭಿಸಲಾಗಿದ್ದು ಜ. 13 ರ ವರೆಗೆ ನಿರಂತರವಾಗಿ ನಡೆಯಲಿದೆ.
ಶ್ರೀಸ್ಕಂದ ಪುರಾಣದಲ್ಲಿ ತಿಳಿಸಿರುವಂತೆ ಧನುರ್ಮಾಸದಲ್ಲಿ ಅರುಣೋದಯದ ಸಮಯದಲ್ಲಿ ದೇವರ ಪೂಜೆ ಮಾಡಿ ಹುಗ್ಗಿ ನಿವೇದನೆ ಮಾಡುವುದರಿಂದ ಅಧಿಕ ಪೂಜಾ ಲ ಒಂದೇ ದಿನದಲ್ಲಿ ಲಭಿಸುತ್ತದೆ. ಪ್ರತಿದಿನ ಬೆಳಗ್ಗೆ ಪೂಜೆ ನಡೆಯಲಿದ್ದು, ಗುರುವಾರ ವೃಂದಾವನಕ್ಕೆ ಬೆಣ್ಣೆ ಅಲಂಕಾರ ಮಾಡಲಾಯಿತೆಂದು ಮಠದ ವಿಚಾರಣಕರ್ತ ಗೋಪಾಲ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.