More

    ಅಂಬೇಡ್ಕರ್ ಕೊಡುಗೆ ಅಪಾರ

    ವಿಜಯಪುರ: ಭಾರತ ದೇಶಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಇಂದಿನ ಎಲ್ಲ ಸಮುದಾಯದ ಜನರಿಗೆ ಅವರು ಮಹಾನ್ ನಾಯಕರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

    ನಗರದ ಅಟಲ್‌ಬಿಹಾರಿ ವಾಜಪೇಯಿ ರಸ್ತೆಯ ರಜಪೂತ ಗಲ್ಲಿಯಲ್ಲಿ ಸೋಮವಾರ ನಡೆದ ಆದಿಜಾಂಬವ ಮಾದಿಗ ದಂಡೋರ ಸಮಾಜ ಸೇವಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

    ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಚರಿತ್ರೆ ತಿಳಿಯುವುದು ಅವಶ್ಯವಾಗಿದೆ. ಅವರು ಪ್ರತಿಯೊಂದು ವರ್ಗದವರ ಧ್ವನಿಯಾಗಿದ್ದರು. ನಗರದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹೊಸ ಮೂರ್ತಿ ಸ್ಥಾಪನೆ ಮಾಡಲಾಗುವುದು. ಈಗಿರುವ ಮೂರ್ತಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಥಾಪಿಸಿ ಅಂಬೇಡ್ಕರ್ ವೃತ್ತದಿಂದ ಗೋಳಗುಮ್ಮಟ ಮೂಲಕ ರಾಷ್ಟ್ರೀಯ ಹೆದ್ದಾರಿ 50ರ ಹಳೇ ರೈಲು ನಿಲ್ದಾಣದವರೆಗಿನ ರಸ್ತೆಗೆ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಮಾರ್ಗ ಎಂದು ನಾಮಕರಣ ಮಾಡಿ ಮಹಾನ್ ನಾಯಕನನ್ನು ಸ್ಮರಿಸಲಾಗುವುದು ಎಂದರು.

    ಆದಿಜಾಂಬವ ಅಭಿವೃದ್ಧಿ ನಿಗಮದಡಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮಾಜ ಬಾಂಧವರಿಗೆ ದೊರಕಿಸುವ ಕೆಲಸ ಮಾಡಲಾಗುವುದು. ನಗರದಲ್ಲಿ ವಿವಿಧಡೆ ಈಗಾಗಲೇ ಜನಸ್ಪಂದನ ಕಾರ್ಯಕ್ರಮ ಮಾಡಲಾಗಿದೆ. ಸರ್ಕಾರದ ಎಲ್ಲ ಯೋಜನೆಗಳ ಲಾಭವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಆದಿಜಾಂಬವ ಮಾದಿಗ ದಂಡೋರ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಸೊನ್ನದ, ಉಪಾಧ್ಯಕ್ಷ ಅಶೋಕ ತಳಕೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮ್ಮಣ ಜಾಧವ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡರಾದ ಅಶೋಕ ಬೆಲ್ಲದ, ರಾಜು ಕುರಿಯವರ, ಸಂತೋಷ ತಳಕೇರಿ, ಬಾಗಪ್ಪ ಕನ್ನೊಳ್ಳಿ, ರಮೇಶ ಪಡಸಲಗಿ, ಪ್ರಕಾಶ ಚವ್ಹಾಣ್, ದತ್ತಾ ಗೊಲಾಂಡೆ, ಮಧು ಕಲಾದಗಿ, ಪಿಂಟು ಚೊರಗೆ, ರಂಗಪ್ಪ ಬೇವಿನಮರದ, ಪರಶುರಾಮ ಕಟ್ಟಿಮನಿ, ಮನೋಹರ ಕಾಂಬ್ಳೆ, ಶರಣು ಕಾಖಂಡಕಿ, ಉಮೇಶ ವೀರಕರ, ಶಶಿಕಾಂತ ಹಲಗಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts