More

    ಆರು ದರೋಡೆಕೋರರ ಬಂಧನ

    ವಿಜಯಪುರ: ಹಣಕ್ಕಾಗಿ ಗುತ್ತಿಗೆದಾರನ ತಂದೆಯನ್ನು ಅಪಹರಿಸಿಕೊಂಡು ಹೋಗಿದ್ದ ಆರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.

    ದೇವಣಗಾಂವ ಗ್ರಾಮದ ರಮೇಶ ಈರಪ್ಪ ಸೊಡ್ಡಿ(45), ರಾಜು ಇಬ್ರಾಹಿಂ ನದಾಫ್ (22), ಜಮೀರ್ ದಾವಲಸಾಬ ಆಲಮೇಲ (25), ಆಲಮೇಲದ ಮಹ್ಮದಲಿ ಬಸೀರಹ್ಮದ ಕಲ್ಮನಿ (26), ಅಫಜಲಪುರದ ಸತೀಶ ಪರಸಪ್ಪ ಆರೇಕರ (32), ಇಸ್ಮಾಯಿಲ್ ದಾವಲಸಾಬ ಕೋತಂಬರಿ (25) ಬಂಧಿತ ಆರೋಪಿಗಳು.

    ಇವರಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡುಗಳು ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮೇ 6 ರಂದು ಅಕ್ಕಲಕೋಟ ತಾಲೂಕಿನ ಹಂದ್ರಾಳ ಗ್ರಾಮದ ಮಲ್ಲಿಕಾರ್ಜುನ ಖಂಡಪ್ಪ ಕಾಟಗಾಂವ ಹಾಗೂ ಆಳಂದದ ಕಾರು ಚಾಲಕ ಸಿದ್ದಣ್ಣ ವಿಶ್ವನಾಥ ಪೂಜಾರಿ ಜೇವರ್ಗಿ ತಾಲೂಕಿನ ಹುಲ್ಲೂರ ಗ್ರಾಮದಿಂದ ಬಗಲೂರ- ಘತ್ತರಗಿ ಮಾರ್ಗವಾಗಿ ಅಫಜಲಪುರಕ್ಕೆ ಹೋಗುವಾಗ ಆರೋಪಿಗಳು ಕಾರು ನಿಲ್ಲಿಸಿ ಕಂಟ್ರಿ ಪಿಸ್ತೂಲ್ ಹಣೆಗೆ ಹಚ್ಚಿ 5 ಲಕ್ಷ ರೂ. ಹಣ ಕೊಡು ಇಲ್ಲವೆಂದರೆ ಕೊಲೆ ಮಾಡುತ್ತೇವೆಂದು ಹೆದರಿಸಿದ್ದರು. ಅಲ್ಲದೆ, ಅಪಹರಣ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ನಾಗರಾಜ ಗುಂದಗಿ ಅವರು ಸಿಂದಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಸದರಿ ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಸಿಂದಗಿ ಪಿಎಸ್‌ಐ ಎಚ್.ಎಂ. ಪಾಟೀಲ, ಪಿಎಸ್‌ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಪ್ರಕರಣ ಭೇದಿಸುವಲ್ಲಿ ಸಫಲವಾಗಿದೆ ಎಂದು ಎಸ್‌ಪಿ ಅಗರವಾಲ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts