More

    ಕಾಂಗ್ರೆಸ್‌ನ 135ನೇ ಸಂಸ್ಥಾಪನೆ ದಿನಾಚರಣೆ

    ವಿಜಯಪುರ: ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್‌ನ 135ನೇ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸಮರ್ಪಣಾ ಸಮಾವೇಶ ಹಾಗೂ ಕಾಂಗ್ರೆಸ್ ಸೇವಾದಳದ ವತಿಯಿಂದ 97ನೇ ದಳ ದಿವಸ್ ಆಚರಣೆ ಹಮ್ಮಿಕೊಳ್ಳಲಾಯಿತು.
    ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಾತ್ರ ಪ್ರಮುಖವಾಗಿದೆ. ಬ್ರಿಟಿಷರು ದೇಶ ಬಿಟ್ಟು ತೊಲಗಲು ಅನೇಕ ಸಂಘಟನೆಗಳು ಶ್ರಮಿಸಿದವಾದರೂ ಯಾವವೂ ಸಫಲಗೊಳ್ಳಲಿಲ್ಲ. ಕಾಂಗ್ರೆಸ್ ಮಾತ್ರ ದೇಶಕ್ಕೆ ಸ್ವಾತಂತ್ರೃ ಕೊಡಿಸುವಲ್ಲಿ ಸಫಲವಾಯಿತು ಎಂದರು.
    ಮಾಜಿ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ಬಿಜೆಪಿ ಸರ್ಕಾರ ಸುಳ್ಳುಗಳ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಭಾರತ ದೇಶ ಕಟ್ಟುವಲ್ಲಿ ನಮ್ಮದೇ ಪ್ರಮುಖ ಪಾತ್ರವಿದೇ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನವರೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿ ಈ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಲಿ ಎಂದು ಶ್ರಮಪಟ್ಟಿದೆ. ಬಿಜೆಪಿಯವರು ಒಮ್ಮೆ ಇತಿಹಾಸ ಓದಲಿ ಆಗ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆ ಅರ್ಥವಾಗುತ್ತದೆ ಎಂದರು.
    ಮುಖಂಡರಾದ ಹಾಸಿಂಪಿರ್ ವಾಲೀಕಾರ, ಅಬ್ದುಲ್‌ಹಮೀದ್ ಮುಶ್ರೀಪ್, ವೈಜನಾಥ ಕರ್ಪೂರಮಠ, ವಿದ್ಯಾವತಿ ಅಂಕಲಗಿ, ಐ.ಎಂ. ಇಂಡೀಕರ, ಚಾಂದಸಾಬ ಗಡಗಲಾವ, ಡಿ.ಎಚ್. ಕಲಾಲ, ಜಮೀರ್‌ಅಹ್ಮದ್ ಬಕ್ಷಿ, ಇಲಿಯಾಸ ಪಟೇಲ ಬಗಲಿ, ಎಸ್.ಎಂ. ದುಂಡಸಿ, ಸಾಹೇಬಗೌಡ ಬಿರಾದಾರ, ಎಂ.ಎಲ್. ಮಕಾನದಾರ, ಶರಣಪ್ಪ ಯಕ್ಕುಂಡಿ, ಈರಪ್ಪ ಜಕ್ಕಣ್ಣನವರ, ಎಚ್.ಎಸ್. ದಳವಾಯಿ, ಸೈಫನ್ ಡಾಂಗೆ, ಸುಭಾಷ ಕಾಲೇಬಾಗ, ಜಯಶ್ರೀ ಭಾರತೆ, ಮಂಜುಳಾ ಗಾಯಕವಾಡ, ಸುಜಾತ ಶಿಂಧೆ, ಅಸೀಮಾ ಕಾಲೇಬಾಗ, ಮಂಜುಳಾ ಜಾಧವ, ಹಮೀದಾ ಬೇಗಂ ಪಟೇಲ, ಕಸ್ತೂರಿ ಪೂಜಾರಿ, ಕುಸುಮಾ ಪವಾರ, ನಿಂಗಪ್ಪ ಸಂಗಾಪೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts