More

    ಶೃಂಗೇರಿಯಲ್ಲಿ ಶ್ರೀ ಚಂಡಿಕಾಪರಮೇಶ್ವರಿ ತೆಪ್ಪೋತ್ಸವ

    ಶೃಂಗೇರಿ: ಶ್ರೀ ಮಠದಲ್ಲಿ ತುಂಗಾ ಪುಷ್ಕರದ ಅಂಗವಾಗಿ ಭಾನುವಾರ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನಡೆಸಿ ತುಂಗಾ ಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು. ನಂತರ ಶ್ರೀ ಶಾರದಾಂಬ, ಶ್ರೀಶಂಕರ ಭಗವತ್ಪಾದರು ಹಾಗೂ ಶ್ರೀವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

    ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಮಹಾರುದ್ರ ಪುರಶ್ಚರಣೆ ಧಾರ್ವಿುಕ ಕಾರ್ಯಗಳ ನಂತರ ಶ್ರೀಮಠದ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಶ್ರೀಮಠದ ಉಭಯ ಶ್ರೀಗಳು ತುಂಗಾ ದಡದಲ್ಲಿರುವ ತುಂಗೆ, ಶ್ರೀ ವರಾಹಮೂರ್ತಿ, ಶ್ರೀ ಶಾರದಾ ವಿಗ್ರಹಕ್ಕೆ ಹಾಗೂ ಶ್ರೀ ಚಂಡಿಕಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ನಂತರ ಶ್ರೀ ಚಂಡಿಕಾಪರಮೇಶ್ವರಿಗೆ ತೆಪ್ಪೋತ್ಸವ ನೆರವೇರಿತು. ಶ್ರೀಮಠದ ಪುರೋಹಿತರು ತುಂಗಾರತಿ ಬೆಳಗಿದರು. ತಾಲೂಕಿನ ಭಕ್ತರು ಸಂಭ್ರದಿಂದ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ತುಂಗೆಗೆ ದೀಪಗಳ ಬಾಗಿನ ಸಮರ್ಪಿಸಿದರು. ಸೋಮವಾರ ಶ್ರೀ ವಿದ್ಯಾಶಂಕರೇಶ್ವರ ತೆಪ್ಪೋತ್ಸವ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts