ಪ್ರತಿನಿತ್ಯ 72 ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ
ಕಡೂರಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳ ಘಟಕಕ್ಕೆ ಶಾಸಕ
ಕೆ.ಎಸ್.ಆನಂದ್ ಚಾಲನೆ ನೀಡಿದರು. ಭಂಡಾರಿ ಶ್ರೀನಿವಾಸ್, ಡಾ.ಉಮೇಶ್
ಮತ್ತಿತರಿದ್ದರು
- ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳನ್ನು
- ಶಾಸಕ ಕೆ.ಎಸ್.ಆನಂದ್ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಈ ಮೊದಲು ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಲ್ಲಿ ಕೇವಲ 16 ಜನರಿಗೆ
- ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಹೊಸದಾಗಿ ಆರು ಯಂತ್ರಗಳನ್ನು ಅಳವಡಿಸಿದ್ದು, ಇದರಿಂದ
- 72 ಜನರು ಚಿಕಿತ್ಸೆ ಪಡೆಯುವ ಅವಕಾಶ ಲಭ್ಯವಾಗಿದೆ. ವಾರಕ್ಕೆ 30 ಸಾವಿರ ಖರ್ಚು
- ಮಾಡಬೇಕಾದೆಡೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ದೊರೆಯುತ್ತದೆ ಎಂದರು.
ಇದೇ ಆಸ್ಪತ್ರೆಯಲ್ಲಿ 12 ಲಕ್ಷ ವೆಚ್ಚದಲ್ಲಿ ಹೊಸದಾಗಿ ಲಿವರ್, ಕಿಡ್ನಿ ಮುಂತಾದ ಕಾರ್ಯಕ್ಷಮತೆ
- ಪರೀಕ್ಷಿಸುವ ಯಂತ್ರ ಕಾರ್ಯಾರಂಭ ಮಾಡಿದೆ. ಇಲ್ಲಿ ಏಕಕಾಲಕ್ಕೆ 32 ಜನರ ರಕ್ತ ಪರೀಕ್ಷೆ
- ಮಾಡಬಹುದಾಗಿದೆ. ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವಿಲ್ಲ ಎನ್ನುವವರು ಇದನ್ನು
- ಗಮನಿಸಬೇಕು. ಹಿಂದೆ ಕರೊನಾ ಸಮಯದಲ್ಲಿ ಕೇವಲ ಹಣ ಹೊಡೆಯುವ ದಂಧೆ
- ಮಾಡಿದವರು ಆಸ್ಪತ್ರೆಗಳಿಗೆ ಇಂತಹ ಸೌಲಭ್ಯಗಳನ್ನು ನೀಡಲು ಏಕೆ ಮುಂದಾಗಲಿಲ್ಲ ಎಂದು
- ಉತ್ತರಿಸಬೇಕು ಎಂದರು.
ರಕ್ತನಿಧಿಯಲ್ಲಿರುವ ಸುಮಾರು 13.50 ಲಕ್ಷ ರೂ. ಹಣವನ್ನು ಸಾರ್ವಜನಿಕ ಆಸ್ಪತ್ರೆಗೆ ಅಲ್ಟ್ರಾ
- ಸೌಂಡ್ ಸ್ಕಾೃನಿಂಗ್ ಯಂತ್ರ ಖರೀದಿಸಲು ಬಳಸಲಾಗುತ್ತದೆ. ಪುರಸಭೆ ಸದಸ್ಯರಾದ
- ಭಂಡಾರಿ ಶ್ರೀನಿವಾಸ್, ಮೋಹನ್ ಕುಮಾರ್, ಕಾಂತರಾಜು, ಟಿಎಂಒ ಡಾ.ರವಿಕುಮಾರ್,
- ಆಸ್ಪತ್ರೆ ಆಡಳಿತಾಧಿಕಾರಿ ಡಾ.ಉಮೇಶ್, ಹಿರಿಯ ಲ್ಯಾಬ್ ಟೆಕ್ನಿಷಿಯನ್ ಸುರೇಶ್ ಹಾಗೂ
- ಸಿಬ್ಬಂದಿಗಳು ಇದ್ದರು.ಕೆ.ಎಸ್.ಆನಂದ್ ಚಾಲನೆ ನೀಡಿದರು. ಭಂಡಾರಿ ಶ್ರೀನಿವಾಸ್, ಡಾ.ಉಮೇಶ್
- ಮತ್ತಿತರಿದ್ದರು.