More

    ಮೇಕೆ ಸಾವಿಗೆ ವಂದೇ ಭಾರತ್‌ ರೈಲು ಕಾರಣವೆಂದು ಕಲ್ಲು ತೂರಿದ ಮೂವರನ್ನು ಬಂಧಿಸಿದ ಪೊಲೀಸರು!

    ಉತ್ತರಪ್ರದೇಶ: ವಂದೇ ಭಾರತ್​ ರೈಲು ಡಿಕ್ಕಿ ಹೊಡೆದ ಕಾರಣ ತಮ್ಮ ಮೇಕೆಗಳು ಬಲಿಯಾಯಿತು ಎಂದು ಸೇಡು ತೀರಿಸಿಕೊಳ್ಳಲು ಮೂವರು ರೈಲಿಗೆ ಕಲ್ಲು ತೂರಿರುವ ಘಟನೆ ಆಯೋಧ್ಯೆಯಲ್ಲಿ ವರದಿಯಾಗಿದೆ.  

    ಮಂಗಳವಾರ(ಜುಲೈ 11) ಅಯೋಧ್ಯೆ ಮೂಲಕ ಹಾದುಹೋಗುವ ನೂತನವಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ ಮೂವರನ್ನು ಇದೀಗ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಜುಲೈ 9 ರಂದು ಆರು ಮೇಕೆಗಳು ರೈಲಿಗೆ ಸಿಲುಕಿ ಸಾವಿಗೀಡಾಯಿತು. ಇದೇ ಕಾರಣವನ್ನು ಮುಂದಿಟ್ಟುಕೊಂಡ ಮುನು ಪಾಸ್ವಾನ್ ಮತ್ತು ಅವರ ಇಬ್ಬರು ಮಕ್ಕಳಾದ ಅಜಯ್ ಮತ್ತು ವಿಜಯ್ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿ, ಮೂವರು ರೈಲಿಗೆ ಕಲ್ಲು ತೂರಿದ್ದಾರೆ.

    ಮೂನು ಪಾಸ್ವಾನ್ ಮತ್ತು ಅವರ ಇಬ್ಬರು ಮಕ್ಕಳು ಅಜಯ್ ಮತ್ತು ವಿಜಯ್ ಸೇರಿದಂತೆ ಮೂವರನ್ನು ಸದ್ಯ ಬಂಧಿಸಲಾಗಿದೆ. ಜುಲೈ 9 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮೂನು ಪಾಸ್ವಾನ್‌ ಅವರಿಗೆ ಸೇರಿದ ಆರು ಮೇಕೆಗಳು ರೈಲಿಗೆ ಸಿಲುಕಿ ಸಾವನ್ನಪಿದವು. ಅವುಗಳ ನಷ್ಟದಿಂದ ಕೋಪಗೊಂಡ ಮೂವರು ಇಂದು ರೈಲಿನ ಮೇಲೆ ಕಲ್ಲು ತೂರಿದ್ದಾರೆ ಎಂದು ಅಯೋಧ್ಯೆಯ ಎಸ್ಎಸ್ಪಿ ರಾಜ್ ಕರಣ್ ನಯ್ಯರ್ ಹೇಳಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts