More

    ಮೋದಿ ಅಧಿಕಾರಕ್ಕೆ ತರಲು ಪಣತೊಟ್ಟ ಯುವಕರು

    ಹುಬ್ಬಳ್ಳಿ : ದೇಶದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟ ಪ್ರಧಾನಿ ನರೇಂದ್ರ ಮೋದಿ ಯುವಕರ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಮೋದಿ ಅವರ ಶ್ರಮದ ಫಲ ಭಾರತ ದೇಶ ವಿಶ್ವ ದರ್ಜೆಗೇರಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಯುವ ಜನಾಂಗ ಪಣ ತೊಟ್ಟಿದೆ ಎಂದು ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಹೇಳಿದರು.

    ಇಲ್ಲಿನ ವಾರ್ಡ್ 73 ರ ಶಿವಶಂಕರ ಕಾಲನಿಯಲ್ಲಿ ಬುಧವಾರ ಆಯೋಜಿಸಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿಯವರ ಅನೇಕ ಜನಪರ ಕಾರ್ಯಕ್ರಮಗಳು ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿವೆ. ಪ್ರಧಾನಿ ಕೈ ಬಲಪಡಿಸುವ ನಿಟ್ಟಿನಲ್ಲಿ ಯುವ ಜನರು ಬೆಂಬಲಿಸಿ, ಬಲಿಷ್ಠ ರಾಷ್ಟ್ರರ್ವಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಪಾಲಿಕೆ ಸದಸ್ಯೆ ಶೀಲಾ ಮಂಜುನಾಥ ಕಾಟಕರ, ವಾರ್ಡ್ ಪ್ರಮುಖರಾದ ಗಣೇಶ ಪೂಜಾರ, ಹಿರಿಯರಾದ ಚಂದ್ರು ಪೂಜಾರ, ಸಹದೇವ ದೊಡ್ಡಮನಿ, ಪ್ರಕಾಶ ಒಂಟಮ, ದೇವೇಂದ್ರ ದುಂಡಿ, ಬಸವರಾಜ ದೇವರಮನಿ, ಗುರುನಾಥ ಪೂಜಾರ, ಅನುಪ ಬಿಜವಾಡ, ಸಂಜು ಬುಗಡಿ ಹಾಗೂ ಇತರರು ಉಪಸ್ಥಿತರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts