More

    ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಮಹಿಳೆ ಸಾವು

    ಮಳವಳ್ಳಿ: ತಾಲೂಕಿನ ಹಲಗೂರು ಸಮೀಪದ ಬಸವನ ಬೆಟ್ಟದಲ್ಲಿ ಜರುಗಿದ್ದ ಟೆಂಪೋ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ತಮ್ಮಡಹಳ್ಳಿ ಗ್ರಾಮದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದು, ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.

    ಗ್ರಾಮದ ಬೋರೇಗೌಡ ಎಂಬುವರ ಪತ್ನಿ ಸರೋಜಮ್ಮ (55) ಮೃತರು. ಸೆ.12 ರಂದು ತಮ್ಮಡಹಳ್ಳಿ ಗ್ರಾಮಸ್ಥರು ಎರಡು ಗೂಡ್ಸ್ ಟೆಂಪೋಗಳಲ್ಲಿ ಬಸವನ ಬೆಟ್ಟದಲ್ಲಿರುವ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮಕ್ಕೆ ತೆರಳಿ ಹಿಂದಿರಿಗುವಾಗ ಅಪಘಾತ ಸಂಭವಿಸಿತ್ತು. ಬೆಟ್ಟದ ಇಳಿಜಾರಿನ ಕಡಿದಾದ ರಸ್ತೆ ತಿರುವಿನಲ್ಲಿ ಗೂಡ್ಸ್ ಟೆಂಪೋ ಉರುಳಿ ಸ್ಥಳದಲ್ಲೇ ಶೋಭಾ ಎಂಬುವರು ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಅವಘಡದಲ್ಲಿ ಒಂಬತ್ತು ಜನರು ತೀವ್ರವಾಗಿ ಗಾಯಗೊಂಡು ಮಂಡ್ಯ, ಮೈಸೂರು, ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅ.6 ರಂದು ಈರಯ್ಯ ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts