More

    ಮನೆಯಲ್ಲಿ ಜಗಳವಾಡಿ ಓಡೋಡಿ ಬಂದು ನದಿಗೆ ಹಾರಿದವನನ್ನು ಕ್ಷಣಮಾತ್ರದಲ್ಲೇ ಬದುಕಿಸಿದ ಅಗ್ನಿಶಾಮಕ ಸಿಬ್ಬಂದಿ!

    ಬಾಗಲಕೋಟೆ: ಮನೆಯಲ್ಲಿ ಜಗಳವಾಡಿಕೊಂಡು ಬಂದ ವ್ಯಕ್ತಿ ಸೀದಾ ಸೇತುವೆ ಮೇಲಿಂದ ನದಿಗೆ ಹಾರಿದ ಘಟನೆ ನಡೆದಿದೆ. ಆತ್ಮಹತ್ಯೆಗೆಂದೇ ಈ ವ್ಯಕ್ತಿ ನದಿಗೆ ಹಾರಿರಬಹುದು ಎಂದು ಅಂದಾಜಿಸಿದ ಕುರಿಗಾಹಿಗಳು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.

    ಕ್ಷಣಮಾತ್ರದಲ್ಲೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ನದಿಗೆ ಇಳಿದು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಅನಗವಾಡಿಯ ಘಟಪ್ರಭಾ ಸೇತುವೆಯಿಂದ ಜಿಗಿದಿದ್ದ ವ್ಯಕ್ತಿಯನ್ನು ನದಿಯಿಂದ ಜೀವಂತವಾಗಿ ಹೊರಗೆ ಕರೆತರಲಾಯಿತು.

    ಈ ವ್ಯಕ್ತಿಯನ್ನು ಚೆನ್ನಬಸಪ್ಪ ಯಲಗಣ್ಣವರ ಎಂದು ಗುರುತಿಸಲಾಗಿದೆ. ಅನಗವಾಡಿ ಗ್ರಾಮದ ಅನತಿ ದೂರದಲ್ಲೇ ಅಗ್ನಿಶಾಮಕ ದಳ ಇರುವುದರಿಂದ ಕೂಡಲೇ ಸ್ಥಳಕ್ಕಾಗಮಿಸಿ ವ್ಯಕ್ತಿಯ ಜೀವವನ್ನು ರಕ್ಷಿಸಿದ್ದಾರೆ.

    ನಂತರ ಜೀವ ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿಗೆ ಕೈ ಮುಗಿದ ಚೆನ್ನಬಸಪ್ಪ ಮುಂದೆಂದೂ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದು, ವೀರಾಪುರ ಗ್ರಾಮದ ನಿವಾಸಿಯಾಗಿದ್ದ ಈತ ಮನೆಯಲ್ಲಿ ಜಗಳ ನಡೆದಿದ್ದರಿಂದ ಆತ್ಮಹತ್ಯೆ ಯತ್ನಕ್ಕೆ ಮುಂದಾಗಿದ್ದಾನೆ. (ದಿಗ್ವಿಜಯ ನ್ಯೂಸ್​)

    ಮಂತ್ರಾಲಯ ಮಠದ ಪ್ರಾಂಗಣದಲ್ಲಿ ಉರುಳಿ ಬಿದ್ದ 250 ವರ್ಷಗಳ ಹಳೆಯ ಮರ: ತಪ್ಪಿದ ಭಾರೀ ಅನಾಹುತ

    ಒಂದೇ ರಾತ್ರಿಯಲ್ಲಿ ಇಬ್ಬರು ಪೊಲೀಸರ ಸಾವು: ಕಾರಣ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts