ಬಾಗಲಕೋಟೆ: ಮನೆಯಲ್ಲಿ ಜಗಳವಾಡಿಕೊಂಡು ಬಂದ ವ್ಯಕ್ತಿ ಸೀದಾ ಸೇತುವೆ ಮೇಲಿಂದ ನದಿಗೆ ಹಾರಿದ ಘಟನೆ ನಡೆದಿದೆ. ಆತ್ಮಹತ್ಯೆಗೆಂದೇ ಈ ವ್ಯಕ್ತಿ ನದಿಗೆ ಹಾರಿರಬಹುದು ಎಂದು ಅಂದಾಜಿಸಿದ ಕುರಿಗಾಹಿಗಳು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.
ಕ್ಷಣಮಾತ್ರದಲ್ಲೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ನದಿಗೆ ಇಳಿದು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಅನಗವಾಡಿಯ ಘಟಪ್ರಭಾ ಸೇತುವೆಯಿಂದ ಜಿಗಿದಿದ್ದ ವ್ಯಕ್ತಿಯನ್ನು ನದಿಯಿಂದ ಜೀವಂತವಾಗಿ ಹೊರಗೆ ಕರೆತರಲಾಯಿತು.
ಈ ವ್ಯಕ್ತಿಯನ್ನು ಚೆನ್ನಬಸಪ್ಪ ಯಲಗಣ್ಣವರ ಎಂದು ಗುರುತಿಸಲಾಗಿದೆ. ಅನಗವಾಡಿ ಗ್ರಾಮದ ಅನತಿ ದೂರದಲ್ಲೇ ಅಗ್ನಿಶಾಮಕ ದಳ ಇರುವುದರಿಂದ ಕೂಡಲೇ ಸ್ಥಳಕ್ಕಾಗಮಿಸಿ ವ್ಯಕ್ತಿಯ ಜೀವವನ್ನು ರಕ್ಷಿಸಿದ್ದಾರೆ.
ನಂತರ ಜೀವ ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿಗೆ ಕೈ ಮುಗಿದ ಚೆನ್ನಬಸಪ್ಪ ಮುಂದೆಂದೂ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದು, ವೀರಾಪುರ ಗ್ರಾಮದ ನಿವಾಸಿಯಾಗಿದ್ದ ಈತ ಮನೆಯಲ್ಲಿ ಜಗಳ ನಡೆದಿದ್ದರಿಂದ ಆತ್ಮಹತ್ಯೆ ಯತ್ನಕ್ಕೆ ಮುಂದಾಗಿದ್ದಾನೆ. (ದಿಗ್ವಿಜಯ ನ್ಯೂಸ್)
ಮಂತ್ರಾಲಯ ಮಠದ ಪ್ರಾಂಗಣದಲ್ಲಿ ಉರುಳಿ ಬಿದ್ದ 250 ವರ್ಷಗಳ ಹಳೆಯ ಮರ: ತಪ್ಪಿದ ಭಾರೀ ಅನಾಹುತ