More

    ಸಂವಿಧಾನ,ಪ್ರಜಾಪ್ರಭುತ್ವ ರಕ್ಷಣೆ ಮುಸ್ಲಿಮರ ಗುರಿ

    ಮೂಡಿಗೆರೆ: ಮೊಘಲರ ದೀರ್ಘ ಕಾಲದ ಆಳ್ವಿಕೆಯಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿ ಪರಿವರ್ತಿಸಲು ಮುಸ್ಲಿಮರು ಪ್ರಯತ್ನಿಸಲಿಲ್ಲ. ಇಂದು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಮುಸ್ಲಿಮರು ತಯಾರಿಲ್ಲ. ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವುದೇ ಮುಸ್ಲಿಮರ ಗುರಿ ಎಂದು ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಮುಸ್ತಾ ಯಮಾನಿ ಹೇಳಿದರು.
    ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬುಧವಾರ ನಡೆದ ಈದುಲ್‌ಫಿತರ್ ಹಬ್ಬದ ವಿಶೇಷ ಪ್ರಾರ್ಥನೆ ನೆರವೇರಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದವರು ಇತರೆ ಸುಮದಾಯದವರಿಗೆ ಕೆಡುಕು ಬಯಸಲಾರದು. ದಬ್ಬಾಳಿಕೆ, ದೌರ್ಜನ್ಯ ನಡೆಸುವವರು ಮುಸ್ಲಿಮರಾಗಿರಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದ ಹೆಸರಿಟ್ಟುಕೊಂಡ ಮಾತ್ರಕ್ಕೆ ನೈಜ ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದರು.
    ಪ್ರತಿ ದಿನ ಐದು ಬಾರಿ ನಮಾಜ್ ಮಾಡಬೇಕು. ಸಮಾಜದ ಓರೆ-ಕೋರೆಗಳನ್ನು ಸರಿಪಡಿಸಬೇಕು. ನೆರೆಹೊರೆಯವರು ಹಸಿದಿರುವಾಗ ಅವರಿಗೆ ಆಹಾರ ನೀಡಿದ ಬಳಿಕ ನಾವು ಆಹಾರ ಸೇವಿಸಬೇಕು. ತನ್ನ ರಕ್ತವನ್ನು ನೀಡಿಯಾದರೂ ಇತರರ ಪ್ರಾಣ ಉಳಿಸಬೇಕು. ಇವೆಲ್ಲವನ್ನು ಪಾಲಿಸುವವರು ಮಾತ್ರ ನೈಜ ಮುಸ್ಲಿಮರಾಗಲಿದ್ದಾರೆ ಎಂದರು.
    ಭಯೋತ್ಪಾದನೆ, ಕೊಲೆ, ಸುಲಿಗೆ, ಅತ್ಯಾಚಾರ, ದೊಂಬಿ, ಕೋಮುಗಲಭೆ, ಹಿಂಸಾಚಾರ ನಡೆಸುವವರು ಯಾವ ಸುಮುದಾಯದ ಹೆಸರಿಟ್ಟುಕೊಂಡರೂ ಅಂತಹ ಕಿಡಿಗೇಡಿಗಳದ್ದು ಒಂದು ಗುಂಪು ಮಾತ್ರ. ಅಂತಹ ದುಷ್ಟಕೂಟದವರನ್ನು ಯಾವುದೋ ಒಂದು ಸಮುದಾಯದ ಕಿಡಿಗೇಡಿಗಳೆಂದು ಬೊಟ್ಟುಮಾಡಿ ತೋರಿಸುವುದು ಸರಿಯಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts