More

    ಬಿಜೆಪಿ ಕಾರ್ಯಕರ್ತರ ಪಕ್ಷ

    ತೇರದಾಳ: ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಮೇಲೆ ಈರಣ್ಣ ಕಡಾಡಿ ಮೊದಲ ಬಾರಿಗೆ ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಅಲ್ಲಮಪ್ರಭುವಿನ ದರ್ಶನ ಪಡೆದು ಪುನೀತರಾದರು. ಮನೆ ದೇವರು ಅಲ್ಲಮಪ್ರಭುವಿಗೆ ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಿ ಆಶೀರ್ವಾದ ಪಡೆದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಅವಕಾಶಗಳು ದೊರೆಯುತ್ತವೆ. ಅದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.

    ರಮೇಶ ಕತ್ತಿ ಸಹಕಾರಿ ಧುರೀಣರಾಗಿದ್ದಾರೆ. ಪ್ರಭಾಕರ ಕೋರಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದು, ಅವರ ಹಿರಿತನಕ್ಕೆ ಮುಂದಿನ ದಿನಗಳಲ್ಲಿ ರಾಜ್ಯಪಾಲರಾಗುವ ಅವಕಾಶ ದೊರೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕಾರ್ಯಕರ್ತರ ಬೇಡಿಕೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ಅಲ್ಲದೆ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯಿದ್ದು, ಎಷ್ಟೋ ಸಾರಿ ಅನುದಾನ ವಾಪಸ್ ಹೋದಂತಹ ಉದಾಹರಣೆಗಳು ಇವೆ. ಹೀಗಾಗಿ ಕೇಂದ್ರದ ಪ್ರತಿನಿಧಿಯಾಗಿ ನಾನು ಕಾರ್ಯನಿರ್ವಹಿಸುತ್ತೇನೆ ಎಂದರು.

    ತೇರದಾಳ ಬ್ಲಾಕ್ ಅಧ್ಯಕ್ಷ ಪ್ರಭಾಕರ ಭಾಗಿ, ರಬಕವಿ-ಬನಹಟ್ಟಿ ಬ್ಲಾಕ್ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ವರ್ಧಮಾನ ಕಡಹಟ್ಟಿ, ರಾಮಣ್ಣ ಹಿಡಕಲ್, ಪ್ರವೀಣ ನಾಡಗೌಡ, ಅರ್ಚಕ ಶ್ರೀಶೈಲ ತೆಳಗಿನಮನಿ, ಮಗಯ್ಯ ತೆಳಗಿನಮನಿ ಸೇರಿ ಪುರಸಭೆ ಸದಸ್ಯರು, ಕಾರ್ಯಕರ್ತರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts