ಸಿರವಾರ: ಪಟ್ಟಣ ಮಾರ್ಗವಾಗಿ ಕೂಲಿ ಕಾರ್ಮಿಕರನ್ನು ನಿಯಮಬಾಹಿರವಾಗಿ ಟಾಪ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ವಾಹನಗಳ ಹಲಗೆಗಳನ್ನು ಪೊಲೀಸರು ಸೋಮವಾರ ಸುಟ್ಟಿದ್ದಾರೆ. ಈ ಮೂಲಕ ವಾಹನಗಳ ಟಾಪ್ ಮೇಲೆ ಜನರನು ಕೂರಿಸಿಕೊಂಡು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ಟಾಪ್ ಸರ್ವಿಸ್ಗೆ ಅವಕಾಶ ನೀಡದಂತೆ ಹಲವು ಬಾರಿ ಸೂಚನೆ ನೀಡಿದ್ದರೂ ವಾಹನಗಳ ಚಾಲಕರು ನಿರ್ಲಕ್ಷಿಸಿದ್ದರು. ಸರಕು ಸಾಗಣೆ ವಾಹನಗಳ ಮೇಲೆಯೂ ಹಲಗೆಗಳನ್ನಿಟ್ಟು ಜನರನ್ನು ಕೂರಿಸಿಕೊಂಡು ಹೋಗಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಾಹನಗಳ ಟಾಪ್ ಮೇಲೆ ಹಾಕಿದ್ದ ಕಟ್ಟಿಗೆಯ ಹಲಗೆಗಳನ್ನು ತೆಗೆಸಿ ಸುಡಲಾಗಿದೆ ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.