More

    ನಿರ್ದೇಶಕರ ಪಟ್ಟಿಯಿಂದ ಸುದೀಪ್​ ಹೆಸರು ಬಿಟ್ಟ ವಿಚಾರ: ಮಾಧ್ಯಮ ವಿರುದ್ಧವೇ ತಿರುಗಿಬಿದ್ದ ನಟ ಆದಿತ್ಯ

    ಬೆಂಗಳೂರು: “ಮುಂದುವರಿದ ಅಧ್ಯಾಯ” ಚಿತ್ರದ ಸುದ್ದಿಗೋಷ್ಠಿಯಲ್ಲಿ ಪ್ರಸಾರವಾದ ವಿಡಿಯೋವೊಂದರಲ್ಲಿ ನಿರ್ದೇಶಕರ ಪಟ್ಟಿಯಿಂದ ನಟ ಸುದೀಪ್​ ಫೋಟೋ ಬಿಟ್ಟ ವಿಚಾರವಾಗಿ ಸೃಷ್ಟಿಯಾದ ವಿವಾದದ ಬೆನ್ನಲ್ಲೇ ಡೆಡ್ಲಿಸೋಮ ಖ್ಯಾತಿಯ ನಟ ಆದಿತ್ಯ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.

    ಟ್ವೀಟ್​ ಮೂಲಕ ‘ಮಾಧ್ಯಮ ಮಾಫಿಯಾ’ ಎಂದು ಕರೆದಿರುವ ನಟ ಆದಿತ್ಯ, ಸ್ನೇಹಿತರ ನಡುವೆ ಬೇಡವಾದ ವಿವಾದಗಳನ್ನು ಹುಟ್ಟುಹಾಕಿ ತಮಾಷೆ ನೋಡುತ್ತಿದ್ದಾರೆ. ಘಟನೆಗಳನ್ನು ಜನರಿಗೆ ಕಹಿಯಾಗಿ ತೋರಿಸಿ, ಒಳ್ಳೆಯದನ್ನು ಹೇಳುವ ಬದಲಾಗಿ ದ್ವೇಷವನ್ನು ಹರಡಿಸುವುದನ್ನು ನಿಲ್ಲಿಸಿ, ನನ್ನ ಸಿನಿಮಾ ಟ್ರೈಲರ್​ನಲ್ಲಿ ಬೇಡವಾದ ವಿಷಯವೊಂದನ್ನು ಪತ್ತೆಹಚ್ಚಿ, ಕೆಳಮಟ್ಟದ ವಿವಾದವನ್ನು ಸೃಷ್ಟಿಸಲಾಗಿದೆ. ಸ್ನೇಹಿತರ ನಡುವೆ ತಂದಿಡುವುದನ್ನು ನಿಲ್ಲಿಸಿ ಎಂದು ಹರಿಹಾಯ್ದಿದ್ದಾರೆ.

    ಅಂದಹಾಗೆ ನಿನ್ನೆ ಮುಂದುವರಿದ ಅಧ್ಯಾಯ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಿನಿಮಾರಂಗದ ನಿರ್ದೇಶಕರ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ಹಿಂದಿನ ನಿರ್ದೇಶಕರರಾದ ವೈ.ವಿ.ರಾವ್​ರಿಂದ ಹಿಡಿದು ಇತ್ತೀಚಿನ ಪ್ರಶಾಂತ್ ನೀಲ್​ವರೆಗೂ ಚಿತ್ರತಂಡ ಧನ್ಯವಾದ ಹೇಳಿತು. ಆದರೆ, ವಿಡಿಯೋದಲ್ಲಿ ಸುದೀಪ್​ ಅವರ ಸುಳಿವೇ ಇರಲಿಲ್ಲ. ಹೀಗಾಗಿ ಈ ವಿಚಾರ ಇದೀಗ ತೀವ್ರ ವಿವಾದ ಹುಟ್ಟುಹಾಕಿದೆ.

    ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ದರ್ಶನ್​ ಬಂದಿದ್ದರಿಂದ ಬೇಕಂತಲೇ ಸುದೀಪ್​ ಫೋಟೋವನ್ನು ಬಿಡಲಾಗಿದೆ ಎಂಬ ವಾದ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆದಿತ್ಯ ಕೂಡ ನೋ ಕಮೆಂಟ್ಸ್​ ಎಂದಿದ್ದರು. ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ವಾಕ್ಸಮರ ನಡೆಯುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts