More

    ಅರಣ್ಯ ಕಾನೂನು, ರಾಷ್ಟ್ರೀಯ ಉದ್ಯಾನ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ 30ರಂದು ಸರ್ವಪಕ್ಷಗಳ ಪಾದಯಾತ್ರೆ

    ಶೃಂಗೇರಿ: ಮಲೆನಾಡಿನ ನಿವಾಸಿಗಳಿಗೆ ತೊಂದರೆಯಾಗಿರುವ ವಿವಿಧ ಅರಣ್ಯ ಕಾನೂನು, ಯೋಜನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.30ರಂದು ನೆಮ್ಮಾರಿನಿಂದ ತನಿಕೋಡು ಗೇಟ್​ವರಗೆ ಸರ್ವಪಕ್ಷಗಳಿಂದ ಪಾದಯಾತ್ರೆ ಮಾಡಿ ನಂತರ ತನಿಕೋಡು ಗೇಟ್​ನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.

    ಪಟ್ಟಣದ ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಂದು ಬೆಳಗ್ಗೆ 10 ಗಂಟೆಗೆ ನೆಮ್ಮಾರಿನಿಂದ ತನಿಕೋಡು ಗೇಟ್​ವರೆಗೆ ತಾಲೂಕಿನ ವಿವಿಧ ಸಂಘಟನೆ, ಸಂಸ್ಥೆಗಳು, ಪಕ್ಷಗಳಿಂದ ಪಾದಯಾತ್ರೆ ನಡೆಯಲಿದೆ.

    ಸಾಮಾಜಿಕ ಕಾರ್ಯಕರ್ತ ಎ.ಎಸ್.ನಯನ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ದಿನೇಶ್ ಹೆಗಡೆ ಅವರನ್ನು ಸರ್ವಪಕ್ಷಗಳ ಸಮಿತಿ ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು.

    ಸಂಘಟಿತ ಹೋರಾಟ ಅಗತ್ಯ: ತಾಲೂಕಿನಲ್ಲಿ ಹಲವು ಬಾರಿ ಜನಸಂಪರ್ಕ ಸಭೆ ನಡೆದರೂ ಈ ಭಾಗದ ಒತ್ತುವರಿ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ. ತಾಲೂಕಿನಲ್ಲಿ ವಸತಿಹೀನರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ನಿವೇಶನ ನೀಡುವ ಅವಕಾಶಗಳಿಗೆ ಅರಣ್ಯ ಇಲಾಖೆ ಕಾನೂನುಗಳು ತೊಡಕಾಗಿವೆ. ಸಮಸ್ಯೆ ಪರಿಹಾರಕ್ಕಾಗಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ತಾಪಂ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಸಲಹೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts