More

    ಸಂಸ್ಕೃತಿ, ಪರಂಪರೆಗೆ ರಂಭಾಪುರಿ ಶ್ರೀ ಕೊಡುಗೆ ಅಪಾರ

    ಚಿಕ್ಕಮಗಳೂರು: ಸಂಪ್ರದಾಯ, ಪರಂಪರೆ, ಸಂಸ್ಕೃತಿ ಉಳಿವಿಗೆ ಶ್ರೀ ರಂಭಾಪುರಿ ಜಗದ್ಗುರುಗಳ ಕೊಡುಗೆ ಅಪಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
    ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವ ಶಾಸ್ತ್ರಿ ಸಭಾಂಗಣದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಜಂಗಮ ಬಳಗ, ಶ್ರೀ ದೇವಿಗುರುಕುಲ, ಪಾರ್ವತಿ ಮಹಿಳಾ ಮಂಡಳಿ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ರಂಭಾಪುರಿ ಶ್ರೀಗಳ 68ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರ ವಿಫಲಗೊಳಿಸಿ ಎರಡೂ ಒಂದೇ ಎಂಬ ಸತ್ಯ ಸಂಗತಿಯನ್ನು ಜಗತ್ತಿಗೆ ಸಾರುವಲ್ಲಿ ಜಗದ್ಗುರುಗಳ ಪಾತ್ರ ಗಣನೀಯ. ಪೂಜ್ಯರ ಪೀಠವಿರುವ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ನನ್ನ ಸೌಭಾಗ್ಯ. ಶ್ರೀಗಳ ಆಶೀರ್ವಾದ ಬಲದಿಂದ ಪ್ರೇರಣೆ ಪಡೆದಿರುವುದಾಗಿ ತಿಳಿಸಿದರು.
    ಧರ್ಮದ ಜತೆಗೆ ರಾಷ್ಟ್ರಹಿತ, ಸಮಾಜಹಿತ, ರೈತಹಿತಕ್ಕೆ ಪೂರಕವಾದ ಬೋಧನೆಗಳನ್ನು ನಿರಂತರವಾಗಿ ಮಾಡುತ್ತಿರುವ ರಂಭಾಪುರಿ ಶ್ರೀಗಳ ಜನ್ಮದಿನ ಹಾಗೂ ಪೀಠಾರೋಹಣದ ವರ್ಧಂತಿ ಮಹೋತ್ಸವವನ್ನು ನಗರದಲ್ಲಿ ಕಳೆದ ಮೂರು ದಶಕಗಳಿಂದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
    ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ನಗರಸಭೆ ಸದಸ್ಯ ಮಧುರಾಜ ಅರಸ್, ನಿವೃತ್ತ ಗ್ರಂಥಪಾಲಕ ಡಾ. ನರೇಂದ್ರ, ಪತ್ರಕರ್ತ ಸುಮಂತ್ ನೆಮ್ಮಾರ್, ಹಯವದನ ರಾವ್, ಯುವ ಮುಖಂಡ ಶಶಿ ಆಲ್ದೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts