ಮೈಸೂರು: ವರುಣದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದ್ದೆ. 1978 ರಿಂದ ನಾನು ವರುಣದಲ್ಲಿ ಸ್ಪರ್ಧೆ ಮಾಡಿದ್ದೇನೆ. ಇಲ್ಲಿನ ಜನ ನನ್ನನ್ನ ಕಾಂಫಿಡೆಂಟ್ ಆಗಿ ಇರಿ ಎಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ವರುಣದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದ್ದೆ. ಸಂತೋಷ್ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಅವರು ಆರ್ಎಸ್ಎಸ್ನವರು. ಬಿಜೆಪಿಯವರು ರಾಜಕೀಯ ದ್ವೇಷದಿಂದ ನನ್ನ ಸೋಲಿಸಬೇಕು ಅಂತ ನಿಂತಿದ್ದಾರೆ. ಅವರೆನು ಇಲ್ಲಿಗೆ ಮತದಾರರ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮಸ್ಕ್ ಭಯ್ಯಾ…ಧನ್ಯವಾದ..ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಮತ್ತೆ ಬಂದಿದೆ: ಅಮಿತಾಭ್ ಬಚ್ಚನ್
ವರುಣದಲ್ಲಿ ಬಿಜೆಪಿ ದ್ವೆಷದ ರಾಜಕೀಯ ಮಾಡುತ್ತಿದ್ದೆ. ವರುಣನ ಬಗ್ಗೆ ನನಗೆ ಆತಂಕ ಇದೆ ಎಂಬುದು ಸುಳ್ಳು ಸುದ್ದಿಯಾಗಿದೆ. ಕೊನೆಯ ಎರಡು ದಿನ ಕೂಡ ಪ್ರಚಾರಕ್ಕೆ ಬರುತ್ತೇನೆಂದಿದ್ದಾರೆ.
ಬಿಜೆಪಿಯವರು ರಾಜಕೀಯ ದ್ವೇಷದಿಂದ ನನ್ನ ಸೋಲಿಸಬೇಕು ಅಂತ ನಿಂತಿದ್ದಾರೆ:
ಸಿದ್ದರಾಮಯ್ಯಗೆ ಭಯವಾಗಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತಾನಾಡಿ, ಪ್ರತಾಪ್ ಸಿಂಹ ಯಾರ್ರಿ…ಅವರಿಗೂ ವರುಣಕ್ಕೂ ಏನ್ ಸಂಬಂಧ ಇದೆ. ಸಿದ್ದರಾಮಯ್ಯಗೆ ಸೋಲುವ ಭೀತಿ ಎದುರಾಗಿದೆ ಎಂದು ಬೊಮ್ಮಾಯಿ ಹೇಳುತ್ತಿದ್ದಾರೆ. ಮೊದಲು ಅವರು ತಮ್ಮ ಕ್ಷೇತ್ರ ನೋಡಿಕೊಳ್ಳಲು ಹೇಳಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಸಿದ್ದು ತಿರುಗೇಟು ಕೊಟ್ಟಿದ್ದಾರೆ.
https://www.vijayavani.net/mumbai-police-arrests-bhojpuri-actress-for-forcing-aspiring-models-into-prostitution/
.