ಬೆಂಗಳೂರು: ನಗರದಲ್ಲಿ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನ ಬಳಿ ಲಕ್ಷಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಯಾಗಿದೆ!
ನಗರದ ಎಸ್ಪಿ ರಸ್ತೆಯಲ್ಲಿ ಭಾನುವಾರ ರಾತ್ರಿ ವಿನೋದ್ ಎಂಬಾತ ಕುಡಿದ ಅಮಲಿನಲ್ಲಿ ಬ್ಯಾಗ್ ಹಿಡಿದುಕೊಂಡು ನಡುರಸ್ತೆಯಲ್ಲಿ ತೂರಾಡುತ್ತಾ ಹೋಗುತ್ತಿದ್ದ. ಇದನ್ನು ಕಂಡ ಇಬ್ಬರು ಬೀಟ್ ಪೊಲೀಸರು ಕುಡುಕನ ಬಳಿ ಹೋಗುತ್ತಿದ್ದಂತೆ ಆತ ಬ್ಯಾಗ್ ಸಮೇತ ಓಡಿದ್ದಾನೆ. ಅನುಮಾನಗೊಂಡ ಪೊಲೀಸರು ಆತನನ್ನ ಹಿಂಬಾಲಿಸಿದ್ದಾರೆ. ಕಿ.ಮೀ. ದೂರದವರೆಗೂ ಓಡಿ ಆತನನ್ನು ಹಿಡಿದರು. ಅವನ ಕೈಯಲ್ಲಿದ್ದ 2 ಬ್ಯಾಗ್ ಅನ್ನು ಪರಿಶೀಲಿಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಒಂದು ಬ್ಯಾಗ್ನಲ್ಲಿ ದಾಖಲೆ ಇಲ್ಲದ 22 ಲಕ್ಷ ಹಣ, ಮತ್ತೊಂದು ಬ್ಯಾಗ್ನಲ್ಲಿ ಒಂದೂ ಮುಕ್ಕಾಲು ಕೆಜಿ ಚಿನ್ನ ಸಿಕ್ಕಿದೆ. ಇದರಲ್ಲಿ ಸರಗಳು, ಚಿನ್ನದ ಬಳೆಗಳು, ಗೋಲ್ಡ್ ಬಿಸ್ಕೆಟ್ಗಳೂ ಇದ್ದವು.
ಕೂಡಲೇ ಆತನ್ನು ವಶಕ್ಕೆ ಪಡೆದ ಪೊಲೀಸರು, ಬ್ಯಾಗ್ಗಳ ಸಮೇತ ಎಸ್ಜೆ ಪಾರ್ಕ್ ಠಾಣೆಗೆ ಕರೆತಂದಿದ್ದಾರೆ. ಆದರೆ ಹಣ ಮತ್ತು ಚಿನ್ನಾಭರಣಕ್ಕೆ ದಾಖಲೆಯೇ ಇಲ್ಲ. ಮೂಲ ಹುಡುಕಿದಾಗ ಚೆನೈನ ಪ್ರತಿಷ್ಠಿತ ಜುವೆಲ್ಲರಿ ಮಾಲ್ನದ್ದು ಎಂದು ಗೊತ್ತಾಗಿದೆ. ಹವಾಲ ಮೂಲಕ ವ್ಯವಹಾರ ಮಾಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಚೆನ್ನೈನ ಜುವೆಲ್ಲರಿ ಶಾಪ್ನ ಮಾಲೀಕನಿಗೆ ನೋಟಿಸ್ ನೀಡಲಾಗಿದೆ. ಇನ್ನು ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಬಾಳು ಕೊಡ್ತೀನಿ… ಎಂದು ಪುಸಲಾಯಿಸಿ ಆಕೆಯ ಮನೆಯಲ್ಲೇ ಇದ್ದವ ಹೀಗಾ ಮಾಡೋದು? ಎಲ್ಲವನ್ನೂ ಕಳೆದುಕೊಂಡಾಕೆಯ ಗೋಳಿನ ಕಥೆ ಇದು