More

    ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನನ್ನು ಹಿಂಬಾಲಿಸಿದ ಪೊಲೀಸರಿಗೆ ಶಾಕ್​! ಆತನ ಕೈಯಲ್ಲಿತ್ತು ಲಕ್ಷ ಲಕ್ಷ ಹಣ, ಕೆಜಿಗಟ್ಟಲೆ ಬಂಗಾರ

    ಬೆಂಗಳೂರು: ನಗರದಲ್ಲಿ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನ ಬಳಿ ಲಕ್ಷಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಯಾಗಿದೆ!

    ನಗರದ ಎಸ್​ಪಿ ರಸ್ತೆಯಲ್ಲಿ ಭಾನುವಾರ ರಾತ್ರಿ ವಿನೋದ್​ ಎಂಬಾತ ಕುಡಿದ ಅಮಲಿನಲ್ಲಿ ಬ್ಯಾಗ್​ ಹಿಡಿದುಕೊಂಡು ನಡುರಸ್ತೆಯಲ್ಲಿ ತೂರಾಡುತ್ತಾ ಹೋಗುತ್ತಿದ್ದ. ಇದನ್ನು ಕಂಡ ಇಬ್ಬರು ಬೀಟ್​ ಪೊಲೀಸರು ಕುಡುಕನ ಬಳಿ ಹೋಗುತ್ತಿದ್ದಂತೆ ಆತ ಬ್ಯಾಗ್​ ಸಮೇತ ಓಡಿದ್ದಾನೆ. ಅನುಮಾನಗೊಂಡ ಪೊಲೀಸರು ಆತನನ್ನ ಹಿಂಬಾಲಿಸಿದ್ದಾರೆ. ಕಿ.ಮೀ. ದೂರದವರೆಗೂ ಓಡಿ ಆತನನ್ನು ಹಿಡಿದರು. ಅವನ ಕೈಯಲ್ಲಿದ್ದ 2 ಬ್ಯಾಗ್ ಅನ್ನು ಪರಿಶೀಲಿಸಿದ ಪೊಲೀಸರೇ ಶಾಕ್​ ಆಗಿದ್ದಾರೆ. ಒಂದು ಬ್ಯಾಗ್​ನಲ್ಲಿ ದಾಖಲೆ ಇಲ್ಲದ 22 ಲಕ್ಷ ಹಣ, ಮತ್ತೊಂದು ಬ್ಯಾಗ್​ನಲ್ಲಿ ಒಂದೂ ಮುಕ್ಕಾಲು ಕೆಜಿ ಚಿನ್ನ ಸಿಕ್ಕಿದೆ. ಇದರಲ್ಲಿ ಸರಗಳು, ಚಿನ್ನದ ಬಳೆಗಳು, ಗೋಲ್ಡ್​ ಬಿಸ್ಕೆಟ್​ಗಳೂ ಇದ್ದವು.

    ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನನ್ನು ಹಿಂಬಾಲಿಸಿದ ಪೊಲೀಸರಿಗೆ ಶಾಕ್​! ಆತನ ಕೈಯಲ್ಲಿತ್ತು ಲಕ್ಷ ಲಕ್ಷ ಹಣ, ಕೆಜಿಗಟ್ಟಲೆ ಬಂಗಾರ

    ಕೂಡಲೇ ಆತನ್ನು ವಶಕ್ಕೆ ಪಡೆದ ಪೊಲೀಸರು, ಬ್ಯಾಗ್​ಗಳ ಸಮೇತ ಎಸ್​ಜೆ ಪಾರ್ಕ್ ಠಾಣೆಗೆ ಕರೆತಂದಿದ್ದಾರೆ. ಆದರೆ ಹಣ ಮತ್ತು ಚಿನ್ನಾಭರಣಕ್ಕೆ ದಾಖಲೆಯೇ ಇಲ್ಲ. ಮೂಲ ಹುಡುಕಿದಾಗ ಚೆನೈನ ಪ್ರತಿಷ್ಠಿತ ಜುವೆಲ್ಲರಿ ಮಾಲ್​ನದ್ದು ಎಂದು ಗೊತ್ತಾಗಿದೆ. ಹವಾಲ ಮೂಲಕ ವ್ಯವಹಾರ ‌ಮಾಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಚೆನ್ನೈನ ಜುವೆಲ್ಲರಿ ಶಾಪ್​ನ ಮಾಲೀಕನಿಗೆ ನೋಟಿಸ್​ ನೀಡಲಾಗಿದೆ. ಇನ್ನು ಪೊಲೀಸ್​ ಸಿಬ್ಬಂದಿಯ ಕಾರ್ಯಕ್ಷಮತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

    ಮಕ್ಕಳ ಸ್ಕೂಲ್ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್‌, ವೈಟ್‌ನರ್‌ ಪತ್ತೆ! ಬೆಂಗಳೂರಲ್ಲಿ ಆಘಾತಕಾರಿ ಪ್ರಕರಣ ಬಯಲು

    ಬಾಳು ಕೊಡ್ತೀನಿ… ಎಂದು ಪುಸಲಾಯಿಸಿ ಆಕೆಯ ಮನೆಯಲ್ಲೇ ಇದ್ದವ ಹೀಗಾ ಮಾಡೋದು? ಎಲ್ಲವನ್ನೂ ಕಳೆದುಕೊಂಡಾಕೆಯ ಗೋಳಿನ ಕಥೆ ಇದು

    ಕೆಲಸ ಕೊಟ್ಟ ಮಾಲೀಕನ ಜತೆ ಲವ್ವಿಡವ್ವಿ! ಮಂಚ ಹಂಚಿಕೊಂಡ ಬಳಿಕ ಈಕೆ ಕೊಟ್ಟ ಕಾಟ ಅಷ್ಟಿಷ್ಟಲ್ಲ… ಬೆಂಗ್ಳೂರಿನ ಬಟ್ಟೆ ವ್ಯಾಪಾರಿಯ ಕಣ್ಣೀರ ಕಥೆ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts