ಚಿತ್ರದುರ್ಗ: ಹೆಣ್ಣುಮಗು ಎಂಬ ಕಾರಣಕ್ಕೆ ಆಗತಾನೇ ಹುಟ್ಟಿದ ಕರುಳಕುಡಿಯನ್ನೇ ಕಸದ ತೊಟ್ಟಿಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಸದ ತೊಟ್ಟಿಯಲ್ಲಿ ಮಗು ಅಳುವ ಶಬ್ದ ಕೇಳಿದ ಸ್ಥಳೀಯರು ಬಂದು ನೋಡಿದಾಗ ಮಗು ಕಂಡಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಮಗುವನ್ನು ರಕ್ಷಿಸಿದ್ದಾರೆ.
ಕರಳುಬಳ್ಳಿ ಸಮೇತ ಈ ಮಗು ಪತ್ತೆಯಾಗಿದೆ. ಸ್ಥಳಕ್ಕೆ ಶಿಶು ಅಭಿವೃದ್ಧಿ ಅಧಿಕಾರಿಗಳ ಜತೆ ವೈದ್ಯರು ಕೂಡ ಭೇಟಿ ನೀಡಿದ್ದರು. ಶಿಶುವಿನ ಕರಳುಬಳ್ಳಿ ತೆಗೆದು ಮಗುವನ್ನು ಶುಚಿಗೊಳಿಸಿದರು ವೈದ್ಯರು. ರಕ್ತಸಿಕ್ತವಾಗಿದ್ದ ಮಗುವನ್ನು ಶುಚಿಗೊಳಿಸಿ ಅದನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.
ಪ್ರೀತಿಸಿದವನ ಮದ್ವೆಯಾಗಿ ಹೆಣವಾದಳು: ಮೃತದೇಹಕ್ಕಾಗಿ ಐದು ದಿನಗಳಿಂದ ನದಿ ಮುಂದೆ ಹೆತ್ತವರ ಆಕ್ರಂದನ
ಚಿನ್ನದ ಪದಕವನ್ನು ಮಿಲ್ಕಾಸಿಂಗ್ಗೆ ಅರ್ಪಿಸಿದ ನೀರಜ್: ಸ್ವರ್ಗದಿಂದ ತಂದೆ ನೋಡುತ್ತಿದ್ದಾರೆಂದು ಕಂಬನಿ ಮಿಡಿದ ಮಗ