ಬೆಂಗಳೂರು: ಆಸ್ತಿ ಕಂದಾಯ ಪಾವತಿ ಮಾಡಿದ್ದ ವ್ಯಕ್ತಿಗೆ ನಕಲಿ ಕಂದಾಯ ರಸೀದಿ ಕೊಟ್ಟು ವಂಚನೆ ಮಾಡಿದ ಆರೋಪದ ಮೇಲೆ ಬಿಬಿಎಂಪಿಯ ನಾಲ್ವರ ಅಧಿಕಾರಿಗಳ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡಿಯೂರು ಆಂಜನೇಯ ದೇವಸ್ಥಾನ ನಿವಾಸಿ ಟಿ.ರಮೇಶ್ ಎಂಬುವರು ದೂರು ನೀಡಿದ್ದಾರೆ. ಈ ಮೇರೆಗೆ ಯಡಿಯೂರು ಬಿಬಿಎಂಪಿ ಕಚೇರಿ ಕಂದಾಯ ಇನ್ಸ್ಪೆಕ್ಟರ್ ಎಚ್.ರಾಮಯ್ಯ, ಕಂದಾಯ ವಸೂಲಿಗಾರ ಶ್ರೀನಿವಾಸ, ಕಂಪ್ಯೂಟರ್ ಆಪರೇಟರ್ ಪ್ರದಿಪ್ ಮತ್ತು ಮಂಜುನಾಥ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2010ರ ಜನವರಿಯಲ್ಲಿ ರಮೇಶ್, ಕಂದಾಯ ಪಾವತಿ ಮಾಡಲು ಯಡಿಯೂರು ಬಿಬಿಎಂಪಿ ಕಚೇರಿಗೆ ಹೋಗಿದ್ದಾಗ 2010ರಿಂದ 2018ರ ವರೆಗೆ 4 ಲಕ್ಷ ರೂ. ಕಂದಾಯ ಸ್ವೀಕರಿಸಿ ಆರೋಪಿತ ಅಧಿಕಾರಿಗಳು ರಸೀದಿ ನೀಡಿದ್ದರು. ಮತ್ತೆ ಏಪ್ರಿಲ್ನಲ್ಲಿ 2018ರಿಂದ ಇಲ್ಲಿಯವರೆಗೆ ಕಂದಾಯ ಪಾವತಿ ಮಾಡಲು ಯಡಿಯೂರು ಪಾಲಿಕೆ ಕಚೇರಿಗೆ ಹೋಗಿದ್ದಾಗ 2010ರಿಂದ ಪಾವತಿ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಬರಿಗೊಂಡ ರಮೇಶ್, ಈ ಹಿಂದೆ ಕಂದಾಯ ಪಾವತಿ ಮಾಡಿದ್ದ ರಸೀದಿ ತೋರಿಸಿದ್ದಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು ನಕಲಿ ರಸೀದಿ ಎಂದು ಖಚಿತಪಡಿಸಿದ್ದಾರೆ.
ಕೊನೆಗೆ ದಿಕ್ಕು ತೋಚದೆ ಈ ಹಿಂದೆ 4 ಲಕ್ಷ ರೂ. ಪಡೆದು ನಕಲಿ ರಸೀದಿ ನೀಡಿದ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಇದರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿವುದಾಗಿ ಬನಶಂಕರಿ ಪೊಲೀಸರು ತಿಳಿಸಿದ್ದಾರೆ.
ಊಟಕ್ಕೂ ಮೊದಲು ಪ್ರಾರ್ಥನೆ ಮಾಡುವ ನಾಯಿ- ಸಕತ್ ವೈರಲ್ ಆಗ್ತಿದೆ ಈ ವಿಡಿಯೋ
ಆಕ್ಸಿಜನ್ಗಾಗಿ ಅರಳಿ ಮರದ ಕೆಳಗೆ ಸೋಂಕಿತರ ದೌಡು- ಜಪ್ಪಯ್ಯ ಎಂದ್ರೂ ಆಸ್ಪತ್ರೆಗೆ ಬರಲೊಲ್ಲರು!