ಬೆಂಗಳೂರು: ಬೆಂಗಳೂರಿನಲ್ಲಿ ಮಿಡ್ನೈಟ್ ಕಳ್ಳರ ಪುಂಡಾಟ ಹೆಚ್ಚಾಗುತ್ತಿದ್ದು ಇಂದು ಮುಂಜಾನೆ ಆಟೊದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಚ್ಚು ತೊರಿಸಿ ಹಣ ಲೂಟಿ ಮಾಡಿದ್ದಾರೆ. ಈ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ 4.30ರ ಗಂಟೆ ಸುಮಾರಿಗೆ ನಡೆದಿದೆ.
ಮಚ್ಚಿನ ಸಮೇತ ಬಂದ ಕಳ್ಳರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದರು. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಮಚಚು ತೋರಿಸಿ ಹಣ ವಸೂಲಿ ಮಾಡಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಈ ಕಳ್ಳರು, ಮೆಜೆಸ್ಟಿಕ್ನಿಂದ ಹೆಣ್ಣೂರು ಬಂಡೆಗೆ ಬರುತಿದ್ದ ಆಟೊಗೆ ಅಡ್ಡ ಹಾಕಿ ಕಳ್ಳತನ ಮಾಡಿದ್ದಾರೆ. ಈ ದರೋಡೆಕೋರರು, ಡಿಯೋ ಬೈಕ್ನಲ್ಲಿ ಬಂದಿದ್ದು ಮಚ್ಚು ತೋರಿಸಿ ಬೆದರಿಸಿ ಪ್ರಯಾಣಿಕನ ಬಳಿ ಇದ್ದ 10 ಸಾವಿರ ಹಣ ಕಿತ್ತುಕೊಂಡು ಹೋಗಿದ್ದಾರೆ. ದುರದೃಷ್ಟಶಾತ್ ಹಣ ಕಳೆದುಕೊಂಡ ಪ್ರಯಾಣಿಕ, ಈಗ ಅಸಹಾಯಕನಾಗಿ ಕೈ ಕಟ್ಟಿ ನಿಂತಿದ್ದಾರೆ.
ಪ್ರಯಾಣಿಕ ಶಿವಾಜಿ ಘೋರ್ಪಡೆ, ಇಂದು ಬೆಳಗ್ಗೆ ಮೆಜೆಸ್ಟಿಕ್ನಿಂದ ರ್ಯಾಪಿಡೋ ಆಟೊ ಬುಕ್ ಮಾಡಿದ್ದರು. ಆ ಸಂದರ್ಭ ಬಂದ ಪುಟ್ಟಸ್ವಾಮಿ ಗೌಡ ಹೆಸರಿನ ಆಟೊ ಚಾಲಕ ಇವರನ್ನು ಪಿಕ್ ಮಾಡಿದ್ದಾರೆ. ಇಬ್ಬರೂ ಹೆಣ್ಣೂರು ಕ್ರಾಸ್ ಬಳಿ ಬಂದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ನೀಡಿದ್ದಾರೆ. ಸದ್ಯ ಪೊಲೀಸರು ಕಳ್ಳರ ಜಾಡು ಹಿಡಿಯಲು ಪರಿಶೀಲನೆ ನಡೆಸುತ್ತಿದ್ದಾರೆ.