ನವದೆಹಲಿ: ನಿರ್ಭಯಾ ಪ್ರಕರಣವನ್ನು ನೆನಪಿಸುವ, ಭಯಾನಕ ಗ್ಯಾಂಗ್ರೇಪ್ ನಿನ್ನೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದೆ. ಯುವತಿಯೋರ್ವಳನ್ನು ನಾಲ್ವರು ಕಾಮುಕರು ಅತ್ಯಾಚಾರ ಮಾಡಿ, ನಾಲಿಗೆಯನ್ನೂ ಕತ್ತರಿಸಿದ್ದರು. ಕೊನೆಗೂ ಆ ಸಂತ್ರಸ್ತೆ ಬದುಕುಳಿಯಲಿಲ್ಲ.
ಈ ಘಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಎಸ್ಐಟಿ (ವಿಶೇಷ ತನಿಖಾ ತಂಡ) ರಚಸಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಹತ್ರಾಸ್ ಗ್ಯಾಂಗ್ರೇಪ್ ಸಂತ್ರಸ್ತೆಯದ್ದಾ? ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ ಬಯಲು!
ಹತ್ರಾಸ್ ಗ್ಯಾಂಗ್ ರೇಪ್ ಬಗ್ಗೆ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದು, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಅತ್ಯಾಚಾರ ಪ್ರಕರಣಗಳೂ ಅಧಿಕವಾಗುತ್ತಿವೆ ಎಂದು ಹೇಳಿದ್ದಾರೆ.
ದೇಶದ ಅನೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದೇ ಕಾರಣದಿಂದ ಅವರಿಗೆ ವಿವಾಹವೂ ಆಗುತ್ತಿಲ್ಲ. ಹಾಗಾಗಿ ರೇಪ್ ಕೇಸ್ಗಳೂ ಹೆಚ್ಚಾಗುತ್ತಿವೆ ಎಂದು ಬರೆದುಕೊಂಡಿದ್ದಾರೆ.
ಹತ್ರಾಸ್ನಲ್ಲಿ ನಡೆದ ಗ್ಯಾಂಗ್ ರೇಪ್ನ್ನು ನಾನು ಖಂಡಿಸುತ್ತೇನೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು. ಲೈಂಗಿಕ ಬಯಕೆ ಎಂಬುದು ಪುರುಷರ ಸಹಜ ವಾಂಛೆ. ಕೆಲವರಿಗೆ ಆಹಾರ ಬಿಟ್ಟರೆ, ಸೆಕ್ಸ್ ಎಂಬುದೇ ಮುಂದಿನ ಅವಶ್ಯಕತೆ ಎಂದಾಗಿಬಿಟ್ಟಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: VIDEO| ಪೇಂಟ್ ರೋಲರ್ನಲ್ಲಿ ವಧುವಿಗೆ ಅರಿಶಿನ ಹಚ್ಚಿದ ಮಹಿಳೆ! ಫನ್ನಿ ಅನ್ನಿಸಿದ್ರೂ ಡಿಫರೆಂಟ್
ಭಾರತ ಸಂಪ್ರದಾಯಬದ್ಧ ದೇಶ. ಮದುವೆಯ ನಂತರವೇ ಲೈಂಗಿಕ ಕ್ರಿಯೆ ನಡೆಸಬೇಕು. ಆದರೆ ಈ ನಿರುದ್ಯೋಗ ಹೆಚ್ಚುತ್ತಿದೆ..ಅನೇಕ ಯುವಕರು ಮದುವೆಯಾಗಲು ಕಷ್ಟಪಡುವಂತಾಗಿದೆ. ಯಾವ ಹೆಣ್ಣುಮಕ್ಕಳೂ ನಿರುದ್ಯೋಗಿಯನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. ಹಾಗಾಗಿ ಅವರು ತಮ್ಮ ವಾಂಛೆ ತೀರಿಸಿಕೊಳ್ಳಲು ಹಪಹಪಿಸುತ್ತಾರೆ. ರೇಪ್ನಂತ ಕೆಟ್ಟ ಕೆಲಸಕ್ಕೆ ಇಳಿಯುತ್ತಿದ್ದಾರೆ ಎಂದು ಮಾಜಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ನಾನು ಅತ್ಯಾಚಾರವನ್ನು ಸಮರ್ಥಿಸುತ್ತಿಲ್ಲ. ಎಲ್ಲೇ ಈ ದುಷ್ಕೃತ್ಯ ನಡೆದರೂ ನಾನದನ್ನು ಖಂಡಿಸುತ್ತೇನೆ. ರೇಪ್ ನಡೆಯಬಾರದು. ಅತ್ಯಾಚಾರ ಪ್ರಕರಣವನ್ನು ಕಡಿಮೆ ಮಾಡಬೇಕೆಂದರೆ ಭಾರತದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ರೂಪಿಸಬೇಕು. ನಿರುದ್ಯೋಗ ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಇನ್ನೊಂದು ನಿರ್ಭಯಾ ಕೇಸ್: ಹತ್ರಾಸ್ ಗ್ಯಾಂಗ್ರೇಪ್ ಪ್ರಕರಣ ಎಸ್ಐಟಿ ತನಿಖೆಗೆ