ತಾಳಿಕೋಟೆ: ರಂಜಾನ್ ತಿಂಗಳು ಪ್ರತಿಯೊಬ್ಬ ಮುಸ್ಲಿಮರಿಗೆ ಪವಿತ್ರವಾಗಿದ್ದು, ಸೌಹಾರ್ದ ಬೆಸೆಯುವ ಸಂಕೇತವಾಗಿದೆ ಎಂದು ಅಸ್ಕಿ ಫೌಂಡೇಷನ್ ಅಧ್ಯ, ಸಮಾಜ ಸೇವಕ ಸಿ.ಬಿ.ಅಸ್ಕಿ (ಕೊಣ್ಣೂರ) ಹೇಳಿದರು.
ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆ ಆವರಣದಲ್ಲಿ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಅಸ್ಕಿ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಇಫ್ತಾರ್ ಕೂಟ ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬ, ಹರಿದಿನಗಳನ್ನು ಎಲ್ಲರೂ ಕೂಡಿ ಆಚರಿಸಿದರೆ ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ. ಪವಿತ್ರ ಹಬ್ಬದಲ್ಲಿ ಉಪವಾಸ ವೃತ ಕೈಗೊಂಡ ಮುಸ್ಲಿಮರಿಗೆ ಪ್ರತಿವರ್ಷವೂ ಕೊಣ್ಣೂರ ಗ್ರಾಮದಲ್ಲಿ ಇಫ್ತಾರ್(ಭೋಜನ) ಕೂಟವನ್ನು ಅಸ್ಕಿ ಫೌಂಡೇಷನ್ನಿಂದ ಆಯೋಜಿಸುತ್ತ ಬರಲಾಗಿದೆ. ಈ ಇಫ್ತಾರ್ ಕೂಟವನ್ನು ತಾಲೂಕಿನಾದ್ಯಂತ ವಿಸ್ತರಿಸಬೇಕೆಂಬ ಇಚ್ಛೆಯೊಂದಿಗೆ ಮುದ್ದೇಬಿಹಾಳ, ನಾಲತವಾಡ, ತಾಳಿಕೋಟೆ ಪಟ್ಟಣದಲ್ಲಿ ಹಮ್ಮಿಕೊಳ್ಳುತ್ತ ಬರಲಾಗಿದೆ. ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳುವ ಮೂಲಕ ಪ್ರೀತಿ ತೋರಿಸಿರುವುದು ಭಾವೈಕ್ಯದ ಸಂಕೇತವಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಅವರು ಮಾತನಾಡಿ, ಆಚರಣೆಗಳು ಬೇರೆಯಾದರೂ ವಿಚಾರಗಳು ಒಂದೇ ಆಗಿವೆ. ಸಾಮರಸ್ಯದ ಹಾದಿಯಲ್ಲಿ ಜನರನ್ನು ಕೊಂಡೊಯ್ಯುವಲ್ಲಿ ಕೊಣ್ಣೂರಿನ ಸಿ.ಬಿ.ಅಸ್ಕಿ ಪರಿವಾರ ಕೊಡುಗೆ ಅಪಾರ ಎಂದರು.
ಪುರಸಭೆ ಮಾಜಿ ಸದಸ್ಯ ಇಬ್ರಾಹಿಂ ಮನ್ಸೂರ, ಖಾಜಾಹುಸೇನ ಚೌದ್ರಿ ಮಾತನಾಡಿ, ಪ್ರತಿವರ್ಷ ಇಫ್ತಾರ್ಕೂಟ ಆಯೋಜಿಸುವ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರ ಕಾರ್ಯ ಶ್ಲಾನೀಯ ಎಂದರು.
ಎಚ್.ಎಸ್.ಪಾಟೀಲ, ಜೈಭೀಮ ಮುತ್ತಗಿ, ಶಿವರಾಜ ಗುಂಡಕನಾಳ ಮಾತನಾಡಿದರು.
ಸಿ.ಬಿ.ಅಸ್ಕಿ ಅವರನ್ನು ಸನ್ಮಾನಿಸಲಾಯಿತು. ಮೂಕೀಹಾಳದ ಕಾಶಿಂಪಟೇಲ ಪಾಟೀಲ, ಮಹಿಬೂಬ ಚೋರಗಸ್ತಿ, ಎಚ್.ಎಂ.ನಾಯಕ, ಸಿದ್ದನಗೌಡ ಪಾಟೀಲ(ನಾವದಗಿ), ಪರಶುರಾಮ ತಂಗಡಗಿ, ಶೌಕತ್ ಲಾಹೋರಿ, ಮೋದಿನಸಾಬ ನಗಾರ್ಚಿ, ಗೌಸ ನಾಸರ, ಮಂಜೂರ ಬೇಪಾರಿ ಮನಗೂಳಿ, ಖಾಜಾಹುಸೇನ ಸಗರ, ಕಾಮರಾಜ ಬಿರಾದಾರ, ವೈ.ಎಚ್.ವಿಜಯಕರ, ಮೈಹಿಬೂಬ ಕೆಂಭಾವಿ, ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ಆಶಿಪ ಕೆಂಭಾವಿ, ಗೋಪಾಲ ಕಟ್ಟಿಮನಿ, ರಾಮನಗೌಡ ಹೊಸಮನಿ ಇದ್ದರು. ಶಮಶುದ್ದೀನ ನಾಲಬಂದ ಸ್ವಾಗತಿಸಿ ನಿರೂಪಿಸಿದರು.