More

    ಕಳೆ, ಗೊಬ್ಬರ ಕಾರ್ಯಕ್ಕೆ ಮಳೆ ಅಡ್ಡಿ

    ನ್ಯಾಮತಿ: ಪಟ್ಟಣ ಸೇರಿದಂತೆ ತಾಲೂಕಿನದ್ಯಂತ ಭಾನುವಾರ ಮುಂಜಾನೆಯಿಂದ ಆರಂಭಗೊಂಡ ಮಳೆ ಸೋಮವಾರವೂ ಮುಂದುವರಿದಿತ್ತು.

    ತಾಲೂಕಿನ ಬಸವನಹಳ್ಳಿ ಗ್ರಾಮದ ಶಿವಪ್ಪ (ಬಿನ್ ಕಲ್ಲಪ್ಪ) ಎಂಬುವವರ ಮನೆಯ ಗೋಡೆ ಭಾಗಶಃ ಕುಸಿದು ಹಾನಿಗೊಂಡಿದೆ.

    ತಾಲೂಕಿನಲ್ಲಿ ನಿರಂತರ ಮಳೆ ಆಗುತ್ತಿದ್ದು, ಕಳೆ, ಗೊಬ್ಬರ ಕಾರ್ಯಕ್ಕೆ ಅಡ್ಡಿಯಾಗಿದೆ. ಅಲ್ಲದೆ ಮಳೆಯು ಇದೇ ರೀತಿಯಾಗಿ ಮೂರ‌್ನಾಲ್ಕು ದಿನ ಮುಂದುವರಿದರೆ ಬೆಳೆಗಳಿಗೆ ಶೀತಬಾಧೆ ಕಾಡುವ ಆತಂಕ ರೈತರಿಗೆ ಎದುರಾಗಿದೆ.

    ನಿರಂತರ ಮಳೆಯಿಂದಾಗಿ ತಾಲೂಕಿನ ಕೆರೆ ಕಟ್ಟೆಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಯಾವುದೇ ಜೀವಹಾನಿಯಂತಹ ಘಟನೆ ವರದಿಯಾಗಿಲ್ಲ.

    ಮಳೆ ವಿವರ: ಭಾನುವಾರ ತಾಲೂಕಿನ ಮಳೆ ಮಾಪನ ಕೇಂದ್ರಗಳಾದ ಸವಳಂಗ 62.6.ಮಿ.ಮೀ, ಬೆಳಗುತ್ತಿ 55.6. ಮಿ.ಮೀ, ಗೋವಿನಕೋವಿ 37.8 ಮಿ.ಮೀ ಮಳೆ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts