More

    ಭಗತಸಿಂಗ್ ಯುವ ಪೀಳಿಗೆಗೆ ಸ್ಫೂರ್ತಿ

    ರಬಕವಿ/ಬನಹಟ್ಟಿ: ಮಹಾನ್ ರಾಷ್ಟ್ರಪ್ರೇಮಿ, ಕ್ರಾಂತಿವೀರ ಭಗತಸಿಂಗ್ ಈ ನಾಡಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಬನಹಟ್ಟಿಯ ಸೋಮವಾರ ಪೇಟೆಯ ರಬಕವಿ-ಬನಹಟ್ಟಿ ಭಗತಸಿಂಗ್ ಯುವಕ ಸಂಘದವರು ಸೋಮವಾರ ಹಮ್ಮಿಕೊಂಡಿದ್ದ ಭಗತಸಿಂಗ್ 113ನೇ ಜನ್ಮದಿನೋತ್ಸವ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಭಗತಸಿಂಗ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

    ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ದೇಶಕ್ಕಾಗಿ ಹೇಗೆ ಬದುಕಬೇಕು ಎಂಬುದನ್ನು ಭಗತಸಿಂಗ್ ತೋರಿಸಿಕೊಟ್ಟಿದ್ದಾರೆ. ಅವರು ಬ್ರಿಟಿಷರಿಗೆ ಕೇವಲ ನನ್ನ ಶರೀರವನ್ನು ಕೊಲ್ಲಬಹುದು. ಆದರೆ ನನ್ನ ಆಲೋಚನೆಯನ್ನು ಅಲ್ಲ. ಅದು ಎಂದೆಂದಿಗೂ ಚಿರಾಯು ಎಂದು ಹೇಳಿದ್ದರು ಎಂದು ತಿಳಿಸಿದರು.

    ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬ್ರಿಜ್‌ಮೋಹನ ಡಾಗಾ, ರಾಜು ಅಂಬಲಿ, ಭಗತಸಿಂಗ್ ಯುವಕ ಸಂಘದ ಆನಂದ ಜಗದಾಳ, ರಾಜು ಟೆಂಗಿನಕಾಯಿ, ಬಸವರಾಜ ಗಾಯಕವಾಡ, ರವಿ ಸಾರವಾಡ, ಕುಮಾರ ಕದಂ, ಶಿವಾನಂದ ಮನಗೂಳಿ, ಕಾಡು ಕೊಂಬಾಗಿ, ಮಾರುತಿ ಆದರಗಿ, ಈಶ್ವರ ನಾಗರಾಳ, ಸಂತೋಷ ಚುನಮರಿ, ಸಂತೋಷ ಪದಮಗೊಂಡ, ರವಿ ರಾವಳ, ರಾಚು ಶಿರೋಳ, ಮಹಾದೇವ ಚನಾಳ ಸೇರಿ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts