ಉತ್ತರಕನ್ನಡ: ವ್ಯಕ್ತಿಯೊಬ್ಬ ಪತ್ನಿಗೆ ಕರೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರ ತಾಲೂಕಿನ ಚಿತ್ತಾಕುಲದ ನಾಖುದಾಮೊಹಲ್ಲಾದಲ್ಲಿ ಶನಿವಾರ (ಜ.29) ನಡೆದಿದೆ.
ಮಹದ್ ಶಫೀಕ್ (34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಮದ್ಯ ವ್ಯಸನದಿಂದಾಗಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಮದ್ಯವಿಲ್ಲದೆ ಒಂದು ದಿನವೂ ಇರುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಗೋವಾದಲ್ಲಿ ಇದ್ದ ಪತ್ನಿಗೆ ಕರೆ ಮಾಡಿದ್ದ ಶಫೀಕ್, ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಕರೆ ಮಾಡಿ ಪತ್ನಿಗೆ ಶಫಿಕ್ ಹೇಳಿದ್ದಾದರೂ ಏನು? ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬುದರ ಕಾರಣ ತಿಳಿದುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ನಿಮ್ಮ ವಿಡಿಯೋ ಕಳುಹಿಸಿ ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್ ಕೊಟ್ಟ ಉತ್ತರ ಹೀಗಿತ್ತು…
ಖ್ಯಾತ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ಗೆ ಶಾಕ್ ಕೊಟ್ಟ ಕೇರಳ ಹೈಕೋರ್ಟ್
ಪತಿ ತುಂಬಾ ಒಳ್ಳೆಯರು, ಆದ್ರೆ ಅವರಿಗೆ ಲೈಂಗಿಕ ನಿರಾಸಕ್ತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತಾ?