More

    ಎಸ್​ಐ-ಮಹಿಳಾ ಕಾನ್ಸ್​ಟೇಬಲ್​ ನಡುವಿನ ಅನೈತಿಕ ಸಂಬಂಧಕ್ಕೆ ಅಮಾಯಕ ವ್ಯಕ್ತಿ ಬಲಿ!

    ನಿಜಾಮಾಬಾದ್​: ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಜತೆ ಅನೈತಿಕ ಸಂಬಂಧ ಹೊಂದಿದ್ದ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಇಂದಾಲ್ವೈ ಪೊಲೀಸ್​ ಠಾಣೆಯ ಪ್ರೊಬೆಷನರಿ ಸಬ್​ ಇನ್ಸ್​ಪೆಕ್ಟರ್​ರನ್ನು ಅಮಾನತು ಮಾಡಲಾಗಿದೆ.

    ಶಿವಪ್ರಸಾದ್​ ರೆಡ್ಡಿ ಅಮಾನಯುಗೊಂಡ ಎಸ್​ಐ. ಮಹಿಳಾ ಕಾನ್ಸ್​ಟೇಬಲ್​ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಜಿಲ್ಲೆಯಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಮಹಿಳಾ ಕಾನ್ಸ್​ಟೇಬಲ್ ಪತಿ ಶಿವಾಜಿರಾವ್​ಗೆ ಈ ವಿಚಾರ ತಿಳಿದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪತ್ನಿಯ ಅನೈತಿಕ ಸಂಬಂಧದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಶಿವಾಜಿರಾವ್​ ನೋವು ತಾಳಲಾರದೇ ಸಾವಿನ ಹಾದಿ ಹಿಡಿದಿದ್ದಾರೆ. ಕಾಮರೆಡ್ಡಿ ಜಿಲ್ಲೆಯ ಗಾಂಧಾರಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಮಹಿಳಾ ಕಾನ್ಸ್​ಟೇಬಲ್​ ಎ1 ಮತ್ತು ಎಸ್​ಐ ಶಿವಪ್ರಸಾದ್​ ರೆಡ್ಡಿ ಎ2 ಆರೋಪಿಗಳು.

    ಶಿವಾಜಿರಾವ್​ ಸಾವಿಗೆ ಆಕೆಯ ಪತ್ನಿ ಮತ್ತು ಎಸ್​ಐ ಕಾರಣವೆಂದು ಗ್ರಾಮಸ್ಥರು ಭಾರೀ ಆಕ್ರೋಶ ಹೊರಹಾಕಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಇದರ ನಡುವೆ ಎಸ್​ಐ ಶಿವಪ್ರಸಾದ್​ರನ್ನು ಅಮಾನತು ಮಾಡಿ ಪೊಲೀಸ್​ ಆಯುಕ್ತ ಕಾರ್ತಿಕೇಯ ಆದೇಶಿಸಿದ್ದಾರೆ. ಆರೋಪಿಗಳ ಮೇಲಿರುವ ಆರೋಪ ಸಾಬೀತಾದರೆ ಇಬ್ಬರು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಲಿದ್ದಾರೆ.

    ಶಿವಪ್ರಸಾದ್​ ರೆಡ್ಡಿ ಕರೀಮ್​ನಗರ ಜಿಲ್ಲೆಯ ವೀಣವಂಕ ಮಂಡಲದ ನರ್ಸಿಂಗಪಲ್ಲಿ ಗ್ರಾಮದವರು. 2019ರ ಡಿಸೆಂಬರ್​ನಲ್ಲಿ ಇಂದಾಲ್ವೈ ಪೊಲೀಸ್​ ಠಾಣೆಗೆ ಪ್ರೊಬೆಷನರಿ ಸಬ್​ ಇನ್ಸ್​ಪೆಕ್ಟರ್ ನೇಮಕವಾಗಿದ್ದರು. ಶಿವಪ್ರಸಾದ್​ ರೆಡ್ಡಿ ವಿರುದ್ಧ ಅನೇಕ ಅಕ್ರಮ ಪ್ರಕರಣಗಳಿವೆ. ಇದೀಗ ಅನೈತಿಕ ಸಂಬಂಧದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಬೈಕ್ ಅಪಘಾತದಲ್ಲಿ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ; ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

    ಅಕ್ಕನ ಮದುವೆ ವೇದಿಕೆ ಮೇಲೆ ಭಾವನಿಗೇ ಕಿಸ್ ಕೊಟ್ಟ ನಾದಿನಿ! ವೈರಲ್ ಆಯ್ತು ವಿಡಿಯೋ

    ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಯುವತಿಗೆ ಕೋಟಿ ಕೋಟಿ ಹಣ ನೀಡಲು ಮುಂದಾದ ಆ್ಯಪಲ್ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts