ಬೆಂಗಳೂರು: ದಿಗ್ವಿಜಯ ನ್ಯೂಸ್ನ ಸಾಮಾಜಿಕ ಕಳಕಳಿಯ ವರದಿಗೆ ಮತ್ತೊಮ್ಮೆ ಮನ್ನಣೆ ದೊರೆತಿದ್ದು, ಮೂರು ರಾಷ್ಟ್ರೀಯ ಪ್ರಶಸ್ತಿಗಳ ಗರಿ ದಿಗ್ವಿಜಯ ನ್ಯೂಸ್ ಮುಡಿಗೇರಿದೆ.
ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಎನ್ಬಾ-2021′ ಅವಾರ್ಡ್ನ ಮೂರು ವಿಭಾಗಗಳಲ್ಲಿ ದಿಗ್ವಿಜಯ ನ್ಯೂಸ್ಗೆ ಪ್ರಶಸ್ತಿ ದೊರಕಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳ ಪೈಕಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದವನ್ನು ಸತ್ಯ-ಮಿಥ್ಯ ಎಂಬ ಕಾರ್ಯಕ್ರಮದಡಿ ತೋರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಕರೊನಾ ಸಂದರ್ಭದಲ್ಲಿ ಈ ಕಾರ್ಯಕ್ರಮದಿಂದ ಬಹಳ ಜನರಿ ಉಪಯೋಗವಾಗಿತ್ತು. ಇದೀಗ ಈ ಕಾರ್ಯಕ್ರಮವನ್ನು ಮೆಚ್ಚಿ ಎನ್ಬಾ ಪ್ರಶಸ್ತಿ ದೊರಕಿದೆ.
ಇದರ ಜತೆಗೆ ಹೃದಯವಂತರು ಎಂಬ ಕಾರ್ಯಕ್ರಮವನ್ನು ಸಹ ದಿಗ್ವಿಜಯ ನ್ಯೂಸ್ ಪ್ರಸಾರ ಮಾಡುತ್ತಿತ್ತು. ಈ ಕಾರ್ಯಕ್ರಮದ ಮೂಲಕ ಮಹಾಮರಿ ಕರೊನಾ ಸಮಯದಲ್ಲಿ ಕಷ್ಟದಲ್ಲಿದ್ದವರಿಗಾಗಿ ಮಿಡಿದಂತಹ ಹೃದಯಗಳ ಬಗ್ಗೆ ವಿಸ್ತೃತವಾದ ಹಾಗೂ ವಿಶೇಷ ವರದಿಯನ್ನು ದಿಗ್ವಿಜಯ ನ್ಯೂಸ್ ಪ್ರಸಾರ ಮಾಡಿತ್ತು.
ಅಲ್ಲದೆ, ಆಂಬ್ಯುಲೆನ್ಸ್ ಕೊರತೆಯ ಕುರಿತಾಗಿ ಸಾಮಾಜಿಕ ಕಳಕಳಿಯುಳ್ಳ ವರದಿಯನ್ನು ಸಹ ದಿಗ್ವಿಜಯ ನ್ಯೂಸ್ ಪ್ರಸಾರ ಮಾಡಿತ್ತು. ಈ ಮೂರು ವರದಿಗಳಿಗೆ ಸಂಬಂಧಪಟ್ಟಂತೆ ಮೂರು ವಿಭಾಗಗಳಲ್ಲಿ ಎನ್ಬಾ ಪ್ರಶಸ್ತಿಯನ್ನು ನಿಮ್ಮ ನೆಚ್ಚಿನ ದಿಗ್ವಿಜಯ ನ್ಯೂಸ್ ಮುಡಿಗೇರಿಸಿಕೊಂಡಿದೆ.
PSI ನೇಮಕಾತಿ ಹಗರಣ: ಕಾಂಗ್ರೆಸ್ ಜತೆಗಿನ ನಂಟಿನ ಬಗ್ಗೆ ಸಿಐಡಿ ಎದುರು ತಿಳಿಸಿದ ದಿವ್ಯಾ ಹಾಗರಗಿ
ಬಿ.ಎಲ್. ಸಂತೋಷ್ ಹೇಳಿಕೆಯಿಂದ ಬಿಜೆಪಿ ಶಾಸಕರು ಹಾಗೂ ಸಚಿವರ ಎದೆಯಲ್ಲಿ ಶುರುವಾಯ್ತು ಭಯ!
ಮೈಸೂರು-ಧಾರವಾಡ ರೈಲಿನಲ್ಲಿ ಮಧ್ಯರಾತ್ರಿ ಬೆಂಕಿ: ಜೀವ ಕೈಯಲ್ಲಿ ಹಿಡಿದುಕೊಂಡ ಪ್ರಯಾಣಿಕರು!