More

    ಕ್ವಾರಂಟೈನ್​ನಲ್ಲಿದ್ದ ನಿರಾಶ್ರಿತ ವೃದ್ಧ ಮೃತಪಡುವ ಮುನ್ನ ವಾರ್ಡನ್​ಗೆ ಹೇಳಿದ್ದು ಏನು?

    ಬೆಂಗಳೂರು: ಜನ್ಮ ದಿನದಂದೇ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿದ್ದ 68 ವರ್ಷದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಗಾಯತ್ರಿ ನಗರದಲ್ಲಿದ್ದ ನಿರಾಶ್ರಿತ ವೃದ್ಧನನ್ನು ಕರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಇಂದು ವೃದ್ಧನ ಹುಟ್ಟಿದ ದಿನ. ಹೀಗಾಗಿ ಆತ ನಿರಾಶ್ರಿತ ಕೇಂದ್ರದ ವಾರ್ಡನ್​ಗೆ ಪೂರಿ ಮಾಡಿಸಿಕೊಡುವಂತೆ ಕೋರಿದ್ದರು. ಅಲ್ಲದೆ ಸಂಜೆ ಕೇಕ್​ ತರಿಸಿ ಕತ್ತರಿಸಿ ಎಲ್ಲರಿಗೂ ಹಂಚಬೇಕು ಎಂದು ಹೇಳಿದ್ದರು. ಇದಾದ 2 ತಾಸಿನಲ್ಲಿ ವೃದ್ಧ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

    ಅನಾಥವಾಗಿರುವ ಶವ: ನಿರಾಶ್ರಿತರ ಕ್ವಾರಂಟೈನ್​ ಕೇಂದ್ರದಲ್ಲಿ ಮೃತಪಟ್ಟಿರುವ ವೃದ್ಧನ ಶವ ಅನಾಥವಾಗಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ. ಕೇಂದ್ರದಲ್ಲಿ 40 ಮಂದಿ ನಿರಾಶ್ರಿತರು ಇದ್ದಾರೆ.

    ಶಾಕಿಂಗ್​ ನ್ಯೂಸ್​: ಮದರಸಾಕ್ಕೆ ಹೋದ 53 ಮಕ್ಕಳಿಗೆ ಕರೊನಾ ಪಾಸಿಟಿವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts