ಅಹಮದಾಬಾದ್: ಬೃಹತ್ ಮೊತ್ತದ ಚೇಸಿಂಗ್ ವೇಳೆ ಆರಂಭಿಕ 4 ವಿಕೆಟ್ಗಳನ್ನು ಬೇಗನೆ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ತಂದುಕೊಟ್ಟ ದೇಶೀಯ ಬ್ಯಾಟರ್ಗಳಾದ ಶಶಾಂಕ್ ಸಿಂಗ್ ಮತ್ತು ಆಶುತೋಷ್ ಶರ್ಮ ಅವರನ್ನು ನಾಯಕ ಶಿಖರ್ ಧವನ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
“ಉತ್ತಮ ಆರಂಭ ಒದಗಿಸುವ ಯೋಜನೆ ಇತ್ತು. ಆದರೆ ನಾನು ಬೇಗನೆ ಔಟಾದೆ. ಇನ್ನೂ ಕೆಲ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡೆವು. ಆದರೆ ಶಶಾಂಕ್ ಅಮೋ ಆಟವಾಡಿದರು. ದೊಡ್ಡ ಮೊತ್ತದ ಚೇಸಿಂಗ್ಗೆ ಬೇಕಾದಂತೆ ಶಶಾಂಕ್ ರನ್ಗತಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಕೊನೆಯವರೆಗೆ ತಾಳ್ಮೆ ಕಾಯ್ದುಕೊಂಡು ಪಂದ್ಯ ಗೆದ್ದುಕೊಟ್ಟರು. ಜತೆಗೆ ಆಶುತೋಷ್ ಕೂಡ ಒತ್ತಡದ ಪರಿಸ್ಥಿತಿಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದರು’ ಎಂದು ಧವನ್ 3 ವಿಕೆಟ್ ಗೆಲುವಿನ ಬಳಿಕ ಹೇಳಿದ್ದಾರೆ.
ಗುಜರಾತ್ ತಂಡದ 199 ರನ್ಗಳಿಗೆ ಪ್ರತಿಯಾಗಿ ಪಂಜಾಬ್, 70 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಆಗ ಕಣಕ್ಕಿಳಿದ ಶಶಾಂಕ್ ಸಿಂಗ್ (61*ರನ್, 29 ಎಸೆತ, 6 ಬೌಂಡರಿ, 4 ಸಿಕ್ಸರ್), ಸಿಕಂದರ್ ಸಿಂಗ್ (15), ಜಿತೇಶ್ ಶರ್ಮ (16) ಜತೆಗೂಡಿ ಚೇತರಿಕೆ ಒದಗಿಸಿದರು. ನಂತರ ಆಶುತೋಷ್ (31) ಜತೆಗೂಡಿ 22 ಎಸೆತಗಳಲ್ಲೇ 43 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಕೊನೇ ಓವರ್ನಲ್ಲಿ 7 ರನ್ ಬೇಕಿದ್ದಾಗ ಆಶುತೋಷ್ ಮೊದಲ ಎಸೆತದಲ್ಲೇ ಔಟಾದರೂ, ಶಶಾಂಕ್ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
*ನಾನು ಬ್ಯಾಟಿಂಗ್ಗೆ ಇಳಿಯುವಾಗ ನಾನೇ ಶ್ರೇಷ್ಠ ಎಂದು ಯೋಚಿಸುವೆ. ಬೌಲರ್ ಯಾರೆಂಬುದಕ್ಕಿಂತ ಎಸೆತಗಳ ಕಡೆ ಗಮನಹರಿಸುವೆ. ನನ್ನ ಆಟದ ಬಗ್ಗೆ ಹೆಮ್ಮೆ ಇದೆ.
| ಶಶಾಂಕ್ ಸಿಂಗ್, ಪಂದ್ಯಶ್ರೇಷ್ಠ
*6: ಪಂಜಾಬ್ ಕಿಂಗ್ಸ್ ಐಪಿಎಲ್ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ಸವಾಲನ್ನು 6 ಬಾರಿ ಬೆನ್ನಟ್ಟಿ ಗೆದ್ದ ಮೊದಲ ತಂಡವೆನಿಸಿತು. ಮುಂಬೈ 5 ಬಾರಿ ಗೆದ್ದಿದ್ದು ಹಿಂದಿನ ದಾಖಲೆ.
*50: ರಶೀದ್ ಖಾನ್ ಐಪಿಎಲ್ನಲ್ಲಿ 2 ತಂಡಗಳ ಪರ ಕನಿಷ್ಠ 50 ವಿಕೆಟ್ ಕಬಳಿಸಿದ 4ನೇ ಬೌಲರ್ ಎನಿಸಿದರು. ಪೀಯುಷ್ ಚಾವ್ಲಾ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್ ಮೊದಲ ಮೂವರು.
ಹಾರ್ದಿಕ್ ನಾಯಕತ್ವದ ಬಗ್ಗೆ ಅಸಮಾಧಾನ! ಮುಂಬೈ ಇಂಡಿಯನ್ಸ್ಗೆ ರೋಹಿತ್ ಶರ್ಮ ಗುಡ್ಬೈ?