ಚೆನ್ನೈ: ಮೈಸೂರು ಮೂಲದ ಖಾಸಗಿ ಜೆಟ್ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಪತ್ತೆಹಚ್ಚಿದ ಪರಿಣಾಮವಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿಂದತೆ 47 ಪ್ರಯಾಣಿಕರು ಸಂಭಾವ್ಯ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನ ತಾಂತ್ರಿಕ ದೋಷದಿಂದ ಸುಮಾರು 2 ಗಂಟೆಗಳ ಕಾಲ ರಜಿನಿಕಾಂತ್ ಅವರು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು.
ಚೆನ್ನೈ ವಿಮಾನ ನಿಲ್ದಾಣದಿಂದ ಜೆಟ್ ವಿಮಾನ ಹೊರಡಬೇಕಾಗಿತ್ತು. ಟೇಕಾಫ್ ತಯಾರಿಗೂ ಮುನ್ನವೇ ವಿಮಾನದಲ್ಲಿನ ತಾಂತ್ರಿಕ ದೋಷವನ್ನು ಪತ್ತೆಹಚ್ಚಿ ಸಮಯಪ್ರಜ್ಞೆ ಮೆರೆದ ಇಂಜಿನಿಯರ್ಗಳು, ಬಳಿಕ ಅದನ್ನು ಸರಿಪಡಿಸಿ ಮುಂದೆ ಆಗಬಹುದಾಗಿದ್ದ ಅನಾಹುತದಿಂದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಅನಿರೀಕ್ಷಿತ ವಿಳಂಬದಿಂದ ಕೆಲವರು ತೊಂದರೆಗೆ ಒಳಗಾದರೆ, ತಲೈವಾ ರಜಿನಿಕಾಂತ್ ಇದೇ ಸಮಯದಲ್ಲಿ ಅಭಿಮಾನಿಗಳೊಂದಿಗೆ ಸಮಯ ಕಳೆದರು. ಈ ವೇಳೆ ಅನೇಕರು ರಜಿನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. (ಏಜೆನ್ಸೀಸ್)