More

    ಸಂಭಾವ್ಯ ವಿಮಾನ ದುರಂತದಿಂದ ರಜಿನಿಕಾಂತ್​ ಸೇರಿ 47 ಪ್ರಯಾಣಿಕರನ್ನು ಪಾರು ಮಾಡಿತು ಸಮಯಪ್ರಜ್ಞೆ!

    ಚೆನ್ನೈ: ಮೈಸೂರು ಮೂಲದ ಖಾಸಗಿ ಜೆಟ್ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಪತ್ತೆಹಚ್ಚಿದ ಪರಿಣಾಮವಾಗಿ ಸೂಪರ್​ ಸ್ಟಾರ್​ ರಜಿನಿಕಾಂತ್​ ಸೇರಿಂದತೆ 47 ಪ್ರಯಾಣಿಕರು ಸಂಭಾವ್ಯ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ​

    ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನ ತಾಂತ್ರಿಕ ದೋಷದಿಂದ ಸುಮಾರು 2 ಗಂಟೆಗಳ ಕಾಲ ರಜಿನಿಕಾಂತ್​ ಅವರು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು.

    ಚೆನ್ನೈ ವಿಮಾನ ನಿಲ್ದಾಣದಿಂದ ಜೆಟ್​ ವಿಮಾನ ಹೊರಡಬೇಕಾಗಿತ್ತು. ಟೇಕಾಫ್​ ತಯಾರಿಗೂ ಮುನ್ನವೇ ವಿಮಾನದಲ್ಲಿನ ತಾಂತ್ರಿಕ ದೋಷವನ್ನು ಪತ್ತೆಹಚ್ಚಿ ಸಮಯಪ್ರಜ್ಞೆ ಮೆರೆದ ಇಂಜಿನಿಯರ್​ಗಳು, ಬಳಿಕ ಅದನ್ನು ಸರಿಪಡಿಸಿ ಮುಂದೆ ಆಗಬಹುದಾಗಿದ್ದ ಅನಾಹುತದಿಂದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

    ಅನಿರೀಕ್ಷಿತ ವಿಳಂಬದಿಂದ ಕೆಲವರು ತೊಂದರೆಗೆ ಒಳಗಾದರೆ, ತಲೈವಾ ರಜಿನಿಕಾಂತ್​ ಇದೇ ಸಮಯದಲ್ಲಿ ಅಭಿಮಾನಿಗಳೊಂದಿಗೆ ಸಮಯ ಕಳೆದರು. ಈ ವೇಳೆ ಅನೇಕರು ರಜಿನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts