ನೆಲಮಂಗಲ: ಸಾಮಾನ್ಯವಾಗಿ ಎಲ್ಲ ಕಳ್ಳರು ಮನೆ-ಕಟ್ಟಡಗಳ ಬೀಗ ಮುರಿದು ಕಳವು ಮಾಡಿದರೆ, ಇವರಿಗೆ ಅಂಥ ಅಗತ್ಯ ಬೀಳುತ್ತಿದ್ದುದೇ ಕಡಿಮೆ. ಏಕೆಂದರೆ ನಿರ್ಮಾಣ ಹಂತದ ಮನೆ-ಕಟ್ಟಡಗಳೇ ಇವರ ಟಾರ್ಗೆಟ್. ಅಷ್ಟಕ್ಕೂ ಇವರು ಕದಿಯುತ್ತಿದ್ದುದೇ ಬೇರೆ..
ಹೀಗೆ ನಿರ್ಮಾಣದ ಹಂತದ ಮನೆ-ಕಟ್ಟಡಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಮೂವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ನಂದೀಶ, ತನ್ವೀರ್ ಅಲಿಯಾಸ್ ತನ್ನು ಮತ್ತು ಮುಜು ಬಂಧಿತರು.
ಇದನ್ನೂ ಓದಿ: ಪಾದಚಾರಿಯ ತಲೆ ಮೇಲೆಯೇ ಸಾಗಿದ ಬಸ್; ವ್ಯಕ್ತಿ ಸ್ಥಳದಲ್ಲೇ ಸಾವು: ರೊಚ್ಚಿಗೆದ್ದ ಸಾರ್ವಜನಿಕರಿಂದ ಬಸ್ ಗಾಜು ಪುಡಿಪುಡಿ..
ಈ ಮೂವರು ನಿರ್ಮಾಣ ಹಂತದ ಮನೆ-ಕಟ್ಟಡಗಳಲ್ಲಿನ ಸೆಂಟ್ರಿಂಗ್ ಶೀಟುಗಳನ್ನು ಕದಿಯುತ್ತಿದ್ದರು. ಬಂಧಿತರಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಸೆಂಟ್ರಿಂಗ್ ಶೀಟ್ ಹಾಗೂ ಟಾಟಾ ಏಸ್ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!