ಮಂಗಳೂರು: ಶತಶತಮಾನಗಳ ಕಾಲ ಉಳಿಯುವ ದೃಢವಾದ ಸುಂದರ ಭವ್ಯ ರಾಮ ಮಂದಿರ ನಿರ್ಮಾಣ ಮಾಡುವ ನಿರ್ಣಯವನ್ನು ಟ್ರಸ್ಟ್ನ ಇತ್ತೀಚಿನ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಯಾವ ರೀತಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ನಿರ್ಮಾಣ ಸಮತಿ ಹಾಗೂ ಶ್ರೀ ರಾಜ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಂಟಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಉಳಿದಂತೆ ಎಲ್ಲವನ್ನೂ ಸಕಾಲದಲ್ಲಿ ನಿರ್ಣಯ ತೆಗೆದುಕೊಂಡು ಮಾಡಲಾಗುತ್ತದೆ ಎಂದರು.
ರಾಮ ಮಂದಿರ ನಿರ್ಮಾಣಕ್ಕೆ ಸಾತ್ವಿಕ ಬಲವೂ ಅವಶ್ಯವಿದ್ದು, ಪ್ರತಿ ಆಸ್ತಿಕರ ಮನೆಯಲ್ಲೂ ರಾಮ ಮಂತ್ರ ಜಪ, ಶ್ರೀರಾಮನ ಭಜನೆ ಮತ್ತೆ ಮೊಳಗಬೇಕು. ಮಂದಿರ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ 67 ಎಕರೆ ಪ್ರದೇಶವನ್ನು ಯೋಜನಾ ಬದ್ಧವಾಗಿ ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.