ಪರಶುರಾಮಪುರ: ರಾಜ್ಯದಲ್ಲಿ ಧರ್ಮಸ್ಥಳ ಸಂಸ್ಥೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ ಎಂದು ಜಾಜೂರು ಗ್ರಾಪಂ ಅಧ್ಯಕ್ಷೆ ಭೀಮಕ್ಕ ಹೇಳಿದರು.
ಸಮೀಪದ ನಾಗಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಂಗವಿಕಲರಿಗೆ ವೀಲ್ಚೇರ್ ಇತರೆ ಪರಿಹರ ವಿತರಿಸಿ ಮಾತನಾಡಿದರು.
ರೈತರು, ಕಾರ್ಮಿಕರು, ಮಹಿಳೆಯರ ಪ್ರಗತಿಗೆ ಸಂಸ್ಥೆ ಹತ್ತು ಹಲವು ಯೋಜನೆ ರೂಪಿಸಿದೆ. ಸಂಸ್ಥೆ ಕಾರ್ಯ ಚಟುವಟಿಕೆ ಮಾದರಿ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಾದ ರವಿಕುಮಾರ, ಚಲುಮಪ್ಪ, ಮುಖಂಡ ಬೊಮ್ಮಣ್ಣ, ಎಸ್ಕೆಡಿಆರ್ಡಿಪಿ ವಲಯ ಮೇಲ್ವಿಚಾರಕ ಡಿ.ಸೋಮಶೇಖರ, ಒಕ್ಕೂಟದ ಅಧ್ಯಕ್ಷ ಸುನಂದಾದೇವಿ, ನರಸಮ್ಮ ಇದ್ದರು.