More

    Sorry.. 300 ಮಂದಿಗಷ್ಟೇ ಜಂಬೂಸವಾರಿ: ಸಚಿವ ಡಾ.ಸುಧಾಕರ್

    ಮೈಸೂರು: ಅಸಂಖ್ಯಾತ ಜನರ ನಡುವೆ ನಡೆಯುವ, ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ವಿಶ್ವವಿಖ್ಯಾತ ದಸರಾ ಈ ಸಲ ಕರೊನಾ ಹಾವಳಿಯಿಂದಾಗಿ ಸರಳವಾಗಿ ನೆರವೇರಲಿದೆ.

    ಅದರಲ್ಲೂ ದಸರಾದ ಪ್ರಮುಖ ಆಕರ್ಷಣೆ ಆಗಿರುವ, ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ವೀಕ್ಷಿಸಲು ಈ ಸಲ ಸೀಮಿತ ಜನರಿಗಷ್ಟೇ ಪ್ರವೇಶ ಇರಲಿದೆ.

    ಕೋವಿಡ್​-19 ಹಿನ್ನೆಲೆಯಲ್ಲಿ ಈ ಸಲ ಜಂಬೂಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತವಾಗಿ ನಡೆಯುತ್ತಿರುವುದು ಒಂದೆಡೆಯಾದರೆ, ಇದನ್ನು ವೀಕ್ಷಿಸಲು ಬರೀ 300 ಜನರಿಗಷ್ಟೇ ಅವಕಾಶ ಇರಲಿದೆ. ಈ ಸಂದರ್ಭದಲ್ಲಿ 300ಕ್ಕಿಂತ ಹೆಚ್ಚು ಜನರು ಸೇರದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವರೂ ಆಗಿರುವ ಡಾ.ಕೆ. ಸುಧಾಕರ್​ ಖಡಾಖಂಡಿತವಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts