More

    ಅಂಗವಿಕಲರಿಂದ ಅಮೃತ ಮಹೋತ್ಸವ ಧ್ವಜಾರೋಹಣ ! ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ವಿಶಿಷ್ಠ ಗೌರವ ಸಲ್ಲಿಕೆ

    ನ್ಯಾಮತಿ: ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಎಸ್‌ಸಿ (ಗ್ರಾಮೀಣ ಸೇವಾ) ಕೇಂದ್ರದಲ್ಲಿ ಅಂಗವಿಕಲರೊಬ್ಬರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರೃ ಅಮೃತ ಮಹೋತ್ಸವವನ್ನು ವಿಧ್ಯುಕ್ತವಾಗಿ ಆಚರಿಸಲಾಯಿತು.

    ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಸಿಎಸ್‌ಸಿ ಕೇಂದ್ರ ಸಿಬ್ಬಂದಿ ಈ ಹಿಂದೆ ಅಂಗವಿಕಲರಾಗಿದ್ದ ವಿನೊಬ ನಗರದ ಕುಮಾರ್ ಅವರಿಗೆ ವ್ಹೀಲ್‌ಚೇರ್ ನೀಡಿ ನೆರವಾಗಿದ್ದರು. ಸೋಮವಾರ ಅವರನ್ನೇ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ ಸ್ವಾತಂತ್ರೊೃೀತ್ಸವದ ಧ್ವಜಾರೋಹಣ ನೆರವೇರಿಸಿಸುವ ಮೂಲಕ ಗೌರವ ತೋರಿದ್ದಾರೆ.

    ಈ ಸಂದರ್ಭದಲ್ಲಿ ಜನಜಾಗೃತಿ ದಳದ ಸದಸ್ಯರಾದ ಎಂ.ಯು.ನಟರಾಜ್, ವಲಯ ಮೇಲ್ವಿಚಾರಕ, ಒಕ್ಕೂಟದ ಅಧ್ಯಕ್ಷೆ ಮಂಜುಳಮ್ಮ, ಗಿರೀಶ್, ಸತೀಶ್, ಎನ್.ಡಿ.ಕವಿತಾ, ಸೇವಾ ಪ್ರತಿನಿಧಿ ಜ್ಯೋತಿ ಮತ್ತು ಚಂದ್ರಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts