ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಯೋಜನೆಗಳಿಂದಲೇ ಭಾರತದ ಆರ್ಥಿಕತೆ ನಾಶವಾಗುತ್ತಿದೆ ಎಂಬರ್ಥದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಟ್ವಿಟರ್ನಲ್ಲೇ ರಾಹುಲ್ ಗಾಂಧಿ ಅವರಿಗೆ ಲಭ್ಯವಾಗಿವೆ.
ಯೆಸ್ ಬ್ಯಾಂಕ್ ಎನ್ಪಿಎ ಸಂಕಷ್ಟಕ್ಕೀಡಾದ ಬಗ್ಗೆ, ಅದರಿಂದ ಹೊರಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಎಲ್ಲರ ಗಮನದಲ್ಲೂ ಇತ್ತು. ಗುರುವಾರ ಆರ್ಬಿಐ ತೆಗೆದುಕೊಂಡ ಕ್ರಮದ ಕಾರಣ ಎಲ್ಲರ ಗಮನ ಈಗ ಯೆಸ್ ಬ್ಯಾಂಕ್ ಕಡೆಗೆ ತಿರುಗಿದೆ. ರಾಜಕೀಯ ದೃಷ್ಟಿಯಿಂದ ಇದನ್ನು ನೋಡಿದ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ, ಈ ಸಂಕಷ್ಟಕ್ಕೆ ಪ್ರಧಾನಿ ಮೋದಿ ಅವರನ್ನು ದೂಷಿಸಿ, ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಆದಾಗ್ಯೂ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಮಾಡಿದ ಟ್ವೀಟ್ ಭಿನ್ನವಾಗಿರುವ ಕಾರಣಕ್ಕೆ ದೇಶವಾಸಿಗಳ ಗಮನಸೆಳೆದಿದೆ.
ರಾಹುಲ್ ಗಾಂಧಿ ಟ್ವೀಟ್ನಲ್ಲೇನಿತ್ತು?:- ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು: ಪ್ರಧಾನಿ ಮೋದಿ ವಿರುದ್ಧ ರಾಹುಲ್, ಚಿದಂಬರಂ ಕಿಡಿ
ಮಾಳವೀಯ ಅವರ ಟ್ವೀಟ್ನಲ್ಲಿರುವುದು ಇಷ್ಟೇ – ನೋ ರಾಹುಲ್, ಭಾರತದ ಬ್ಯಾಂಕುಗಳು ಮತ್ತು ಆರ್ಥಿಕತೆ ಹಾಳಾಗಿ ಇಂದಿನ ಸ್ಥಿತಿ ತಲುಪುವುದಕ್ಕೆ ನಿಮ್ಮ ಹಿಂದಿನ ಹಣಕಾಸು ಸಚಿವರಾದ ಪಿ.ಚಿದಂಬರಂ ಅವರೇ ಕಾರಣ. ಹೀಗೆ ಹೇಳಿದ್ದು ನಾನಲ್ಲ, ನಿಮ್ಮ ಮಾಜಿ ಮಿತ್ರ..
ಇಷ್ಟು ಸ್ಟೇಟಸ್ ಜತೆಗೆ ಅಮರ್ ಸಿಂಗ್ ಅವರದೊಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಅಮರ್ ಸಿಂಗ್ ಅವರು, ಎನ್ಪಿಎ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
No Rahul, it is P Chidambaram, your former finance minister, who is responsible for the mess India’s banks and economy are in…
Don’t take my word for it. Listen to your former ally. https://t.co/zSeOIDYvGy pic.twitter.com/T1Mfq3iiNB
— Amit Malviya (@amitmalviya) March 6, 2020