More

    ರಾಹುಲ್ ಗಾಂಧಿ ಅವರ #NoBank ಟ್ವೀಟ್​ ಕಾರಣಕ್ಕೆ ಬಹಿರಂಗವಾಯಿತು ಎನ್​ಪಿಎಯ ರಹಸ್ಯ!

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಯೋಜನೆಗಳಿಂದಲೇ ಭಾರತದ ಆರ್ಥಿಕತೆ ನಾಶವಾಗುತ್ತಿದೆ ಎಂಬರ್ಥದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಟ್ವಿಟರ್​ನಲ್ಲೇ ರಾಹುಲ್ ಗಾಂಧಿ ಅವರಿಗೆ ಲಭ್ಯವಾಗಿವೆ.

    ಯೆಸ್ ಬ್ಯಾಂಕ್ ಎನ್​ಪಿಎ ಸಂಕಷ್ಟಕ್ಕೀಡಾದ ಬಗ್ಗೆ, ಅದರಿಂದ ಹೊರಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಎಲ್ಲರ ಗಮನದಲ್ಲೂ ಇತ್ತು. ಗುರುವಾರ ಆರ್​ಬಿಐ ತೆಗೆದುಕೊಂಡ ಕ್ರಮದ ಕಾರಣ ಎಲ್ಲರ ಗಮನ ಈಗ ಯೆಸ್​ ಬ್ಯಾಂಕ್ ಕಡೆಗೆ ತಿರುಗಿದೆ. ರಾಜಕೀಯ ದೃಷ್ಟಿಯಿಂದ ಇದನ್ನು ನೋಡಿದ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ, ಈ ಸಂಕಷ್ಟಕ್ಕೆ ಪ್ರಧಾನಿ ಮೋದಿ ಅವರನ್ನು ದೂಷಿಸಿ, ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಆದಾಗ್ಯೂ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಮಾಡಿದ ಟ್ವೀಟ್ ಭಿನ್ನವಾಗಿರುವ ಕಾರಣಕ್ಕೆ ದೇಶವಾಸಿಗಳ ಗಮನಸೆಳೆದಿದೆ.

    ರಾಹುಲ್ ಗಾಂಧಿ ಟ್ವೀಟ್​ನಲ್ಲೇನಿತ್ತು?:- ಯೆಸ್​ ಬ್ಯಾಂಕ್​ ಆರ್ಥಿಕ ಬಿಕ್ಕಟ್ಟು: ಪ್ರಧಾನಿ ಮೋದಿ ವಿರುದ್ಧ ರಾಹುಲ್​, ಚಿದಂಬರಂ ಕಿಡಿ

    ಮಾಳವೀಯ ಅವರ ಟ್ವೀಟ್​ನಲ್ಲಿರುವುದು ಇಷ್ಟೇ – ನೋ ರಾಹುಲ್, ಭಾರತದ ಬ್ಯಾಂಕುಗಳು ಮತ್ತು ಆರ್ಥಿಕತೆ ಹಾಳಾಗಿ ಇಂದಿನ ಸ್ಥಿತಿ ತಲುಪುವುದಕ್ಕೆ ನಿಮ್ಮ ಹಿಂದಿನ ಹಣಕಾಸು ಸಚಿವರಾದ ಪಿ.ಚಿದಂಬರಂ ಅವರೇ ಕಾರಣ. ಹೀಗೆ ಹೇಳಿದ್ದು ನಾನಲ್ಲ, ನಿಮ್ಮ ಮಾಜಿ ಮಿತ್ರ..

    ಇಷ್ಟು ಸ್ಟೇಟಸ್ ಜತೆಗೆ ಅಮರ್ ಸಿಂಗ್ ಅವರದೊಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಅಮರ್ ಸಿಂಗ್ ಅವರು, ಎನ್​ಪಿಎ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts