ಮಂಗಳೂರು: ಅರಬ್ಬಿ ಸಮುದ್ರ ಆ.8ರ ತನಕ ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕಾ ದೋಣಿಗಳನ್ನು ಕೂಡಲೇ ದಡ ಸೇರಿಸಬೇಕೆಂದೂ ಅವರ ಪ್ರಕಟಣೆ ತಿಳಿಸಿದೆ.