ಬೀದಿ ದೀಪ ನಿರ್ವಹಣೆ ಟೆಂಡರ್ ಅಕ್ರಮ ಆರೋಪಿತರ ಮೇಲೆ ಕ್ರಮ ಏಕಿಲ್ಲ?
ಶಿವಾನಂದ ಹಿರೇಮಠ, ಗದಗ
ಬೀದಿ ದೀಪ ನಿರ್ವಹಣೆ ಗುತ್ತಿಗೆ ಟೆಂಡರ್ನಲ್ಲಿ ಕಾನೂನು ಬಾಹಿರ ಪ್ರಕ್ರಿಯೆ ಜರುಗಿದ್ದ ಪ್ರಕರಣ ಬೆಳಕಿಗೆ ಬಂದರೂ, ನಗರಾಭಿವೃದ್ಧಿ ಕೋಶ ಮತ್ತು ಜಿಲ್ಲಾಡಳಿತ ಆರೋಪಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಸಕ್ಷಮ ಪ್ರಾಧಿಕಾರವನ್ನೂ ಮೀರಿ ಕೋಟಿಗೂ ಅಧಿಕ ಮೊತ್ತದ ಟೆಂಡರ್ ಪ್ರಕ್ರಿಯೆ ನಗರಸಭೆ ಆವರಣದಲ್ಲೇ ನಡೆದರೂ ಅಕ್ರಮ ವಿರುದ್ಧ ತೊಡೆ ತಟ್ಟಬೇಕಿದ್ದ ಜಿಲ್ಲಾಡಳಿತವು ನಗರಸಭೆ ಅಧಿಕಾರಿಗಳ ಮತ್ತು ಕೆಲ ಜನಪ್ರತಿನಿಧಿಗಳ ಹಿತಾಸಕ್ತಿಗಾಗಿ, ಮುತುವಜಿರ್ಗಾಗಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹಿಂದಡಿ ಇಟ್ಟಿತೇ ಎಂಬ ಮಾತುಗಳು ಜಿಲ್ಲಾಡಳಿತ ಮತ್ತು ನಗರಸಭೆ ಆವರಣದಲ್ಲಿ ಕೇಳಿ ಬರುತ್ತಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ನಡೆದ ಅಕ್ರಮ ಕುರಿತು ವಿಜಯವಾಣಿ ದಿನಪತ್ರಿಕೆ ನಿರಂತರ ಸುದ್ದಿ ಬಿತ್ತರಿಸಿತ್ತಿದ್ದಂತೆ, ಟೆಂಡರ್ ದಾಖಲೆ ಪರಿಶೀಲಿಸಿದ್ದ ಜಿಲ್ಲಾಡಳಿತ ಜ.3 ರಂದು ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿತ್ತು. ಟೆಂಡರ್ ನಲ್ಲಿ ಆಗಿರುವ ಲೋಪದೋಷಗಳನ್ನು ನೋಟೀಸ್ ನಲ್ಲಿ ಉಲ್ಲೇಖಿಸಿ, ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ವಿರುದ್ಧ ಸರ್ಕಾರಿ ಸೇವಾ ನಿಯಮ ಉಲ್ಲಂನೆ(ಕೆಸಿಎಸ್) ಕುರಿತು ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ನೋಟೀಸ್ ಗೆ ಉತ್ತರವಾಗಿ ಲಿಖಿತ ಹೇಳಿಕೆ ಸಲ್ಲಿಸಿದ್ದ ಗಂಗಪ್ಪ ಎಂ. ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅಕ್ರಮ ಸಾಭಿತಾಗಿದ್ದರೂ ಪೌರಾಯುಕ್ತ ಗಂಗಪ್ಪ ಎಂ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಡಿ ಇಡದಿರುವುದು ಯಕ್ಷ ಪ್ರಶ್ನೆ ಆಗಿದೆ.
ದಾಖಲೆ ಬಹಿರಂಗ ಏಕಿಲ್ಲ?
ಬೀದಿ ದೀಪ ನಿರ್ವಹಣೆ ಟೆಂಡರ್ ದಾಖಲೆಗಳು ಇತ್ತೀಚಿನ ವರೆಗೂ ನಗರಸಭೆ ಪ್ರಭಾವಿ ಜನಪ್ರತಿನಿಧಿ ಮನೆಯಲ್ಲಿ ಇಟ್ಟುಕೊಳ್ಳಲಾಗಿತ್ತು. ವಿಜಯವಾಣಿ ದಿನ ಪತ್ರಿಕೆಯಲ್ಲಿ ವರದಿ ಬಿತ್ತರಿಸುತ್ತಿದ್ದಂತೆ ನಗರಸಭೆಯಲ್ಲಿ ತಂದು ಇಡಲಾಯಿತು ಎಂದು ನಗರಸಭೆ ಸದಸ್ಯರೇ ವಿಜಯವಾಣಿಗೆ ತಿಳಿಸಿದ್ದಾರೆ. ಈ ನಡುವೆ ಜಿಲ್ಲಾಡಳಿತದಿಂದ ಟೆಂಡರ್ ಅಕ್ರಮದ ತನಿಖೆ ನಡೆಯುತ್ತಿರುವಾಗಲೇ ನಿರ್ವಹಣೆಗಾಗಿ ಕಡಿಮೆ ಬಿಡ್ ಮಾಡಿದ ಚೈತನ್ಯ ಎಲೆಕ್ಟ್ರಿಕಲ್ ಗುತ್ತಿಗೆದಾರನಿಗೆ ನಗರಸಭೆ ಸದ್ದಿಲ್ಲದೇ ಟೆಂಡರ್ ಕಾರ್ಯಾದೇಶ ನೀಡಿದ ದಾಖಲೆಯನ್ನು ನಗರಸಭೆ ಗೌಪ್ಯವಾಗಿ ಇಟ್ಟಿಕೊಂಡಿದೆ. ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಹೊಸ ಕಾರ್ಯಾದೇಶ ದಾಖಲೆಯನ್ನು ಕೇಳೀದರೂ ನಗರಸಭೆ ಅಧಿಕಾರಿಗಳು ಸಲ್ಲಿಸುತ್ತಿಲ್ಲ ಎನ್ನಲಾಗಿದೆ. ಈ ಕುರಿತು ಪೌರಾಯುಕ್ತರಿಂದ ಮೌಖಿಕ ಹೇಳಿಕೆ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ ಎನ್ನಲಾಗಿದೆ. ಒಂದು ತಪ್ಪನ್ನು ಮುಚ್ಚಲು ಹಲವು ತಪ್ಪುಗಳನ್ನು ನಗರಸಭೆ ಮೈಮೇಲೆ ಎಳೆದುಕೊಳ್ಳುತ್ತಿದೆ. ಈ ಅಕ್ರಮವನ್ನು ತಡೆ ಹಿಡಿಯಲು ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ನಗರಸಭೆ ಸದಸ್ಯರು ಆರೋಪಿಸಿದ್ದಾರೆ.
ಏನಿದು ಪ್ರಕರಣ:
ಕೆಟಿಪಿಪಿ ನಿಯಮ ಉಲ್ಲಂಘಿಸಿದ ಠರಾವು ಸಂಖ್ಯೆ 263ರ ನಡಾವಳಿಗೆ ನಗರಸಭೆ ಅಧ್ಯೆ ಉಷಾ ದಾಸರ ಮತ್ತು ಕೋಟಿಗೂ ಅಧಿಕ ಮೊತ್ತದ ಕಾರ್ಯಾದೇಶಕ್ಕೆ ಪೌರಾಯುಕ್ತರು ಸಹಿ ಮಾಡಿದ್ದಲ್ಲದೇ ಕಡಿಮೆ ಬಿಡ್ ಮಾಡಿದ ಗುತ್ತಿಗೆದಾರನನ್ನು ಕೈಬಿಟ್ಟು ಅಧಿಕ ಬಿಡ್ ಮಾಡಿದ ಗುತ್ತಿಗೆದಾರನಿಗೆ ಟೆಂಡರ್ ನೀಡಿದ ಪ್ರಕರಣ ಇದಾಗಿದೆ. ಟೆಂಡರ್ ಆಥಿರ್ಕ ಬಿಡ್ ತೆರೆಯುವುದಕ್ಕೂ ಪೂರ್ವದಲ್ಲೇ ಅಧ್ಯೆ ಉಷಾ ದಾಸರ ನೇತೃತ್ವದಲ್ಲಿ ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಟೆಂಡರ್ ದರಕ್ಕೆ ಅನುಮೋದನೆ ನೀಡಿದ್ದರಿಂದ ಅಕ್ರಮ ಸಾಭಿತಾಗಿದೆ. ಜ.5 ರಂದೇ ಪೌರಾಯುಕ್ತರು ಹೇಳಿಕೆ ನೀಡಿದ್ದರೂ ಜಿಲ್ಲಾಡಳೀತ ಕ್ರಮ ಕೈಗೊಳ್ಳದಿರುವುದೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕೋಟ್:
ಬೀದಿ ದೀಪ ನಿರ್ವಹಣೆ ಎಂದರೇ ಭ್ರಷ್ಟರಿಗೆ ಸ್ವರ್ಗ ಇದ್ದಂತೆ. 2018 ರಿಂದಲೂ ಜಿಲ್ಲಾಡಳೀತ ಈ ಕುರಿತು ತನಿಖೆ ನಡೆಸಬೇಕು. ನಗರಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಇರುವುದರಿಂದ ಎಲ್ಲ ಅಕ್ರಮಗಳು ಮುಚ್ಚಿ ಹೋಗುತ್ತಿವೆ.
– ಸುರೇಶ ಕಟ್ಟಿಮನಿ, ನಗರಸಭೆ ಕಾಂಗ್ರೆಸ್ ಸದಸ್ಯ.
ಕೋಟ್:
ತನಿಖೆ ಡೆಯುವಾಗ ಮತ್ತೊಬ್ಬರಿಗೆ ಗುತ್ತಿಗೆ ನೀಡುವುದು ಅಪರಾಧ ಆಗುತ್ತದೆ. ಈ ಕುರಿತು ಪೌರಾಯುಕ್ತರನ್ನು ಕರೆದು ವಿಚಾರಿಸಲಾಗುವುದು. ಟೆಂಡರ್ ಅಕ್ರಮ ಕುರಿತು ಮೌಖಿಕವಾಗಿ ಪ್ರತಿಕ್ರಿಯೆ ಕೇಳಲಾಗುವುದು.
ವೈಶಾಲಿ ಎಂ.ಎಲ್. ಜಿಲ್ಲಾಧಿಕಾರಿ