More

    ಚಿರತೆ ಪ್ರತ್ಯಕ್ಷ, ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ

    ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಗುಡ್ಡದಲ್ಲಿ ಚಿರತೆ ಕಂಡುಬಂದಿರುವುದರಿಂದ, ನೀರಮಾನ್ವಿ ಮತ್ತು ಬೆಟ್ಟದೂರು ಗ್ರಾಮಗಳಲ್ಲಿ ಗುಡ್ಡದ ಕಡೆಗೆ ಹೋಗದಂತೆ ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗುಡ್ಡದಲ್ಲಿ ಚಿರತೆ ಇರುವುದನ್ನು ಶನಿವಾರ ನೋಡಿದ್ದ ಗ್ರಾಮಸ್ಥರು, ಈ ಕುರಿತು ಅರಣ್ಯಾಧಿಕಾರಿ ರಾಜೇಶ ನಾಯಕಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ತಂಡ ಚಿರತೆ ಸೆರೆಗೆ ಬೋನು ಇಟ್ಟಿದ್ದಾರೆ. ಚಿರತೆಯನ್ನು ಸೆಳೆಯಲು ಬೋನಿನಲ್ಲಿ ನಾಯಿ ಇರಿಸಲಾಗಿದೆ. ಸೋಮವಾರ ಕೂಡ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts