More

    ಉಗ್ರ ಸಂಘಟನೆಯೊಂದಿಗೆ ಲಿಂಕ್​: ಶಿರಸಿ ಮೂಲದ ಯುವಕನ ಬಂಧನ

    ಶಿರಸಿ: ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಶಿರಸಿಯ ಯುವಕನೊರ್ವನನ್ನು ರಾಷ್ಟ್ರೀಯ ತನಿಖಾ ದಳವದರು (ಎನ್.ಐ.ಎ. ) ಬಂಧಿಸಿ, ವಿಚಾರಣೆಗೆ ಕರೆದೊಯ್ದಿದ್ದಾರೆ.

    ಶಿರಸಿ ತಾಲೂಕಿನ ಅರೆಕೊಪ್ಪದ ಸಯ್ಯದ್ ಇದ್ರೀಸ್ ಸಬಿ ಸಾಬ ಮುನ್ನಾ (25) ಬಂಧಿತ ಆರೋಪಿಯಾಗಿದ್ದಾನೆ. ಈ ಹಿಂದೆ ಇದೇ ವ್ಯಕ್ತಿಯನ್ನು ತನಿಖಾ ದಳವದರು ಮೂರು ಬಾರಿ ವಿಚಾರಣೆ ನಡೆಸಿದ್ದರು.

    ಇದನ್ನೂ ಓದಿ: ಬಿಹಾರದಲ್ಲಿ ಸಿಎಂ ಸ್ಥಾನ ಬದಲಾಗುತ್ತಾ? ಬಿಜೆಪಿಯ ಸುಶೀಲ್​ ಮೋದಿ ಹೇಳಿದ್ದು ಹೀಗೆ…

    ಅರೆಕೊಪ್ಪಕ್ಕೆ ಭೇಟಿ ನೀಡಿದ್ದ ಎನ್.ಐ.ಎ. ಸಿಬ್ಬಂದಿ ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಬುಧವಾರ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳ ಮೂಲದ ಎನ್.ಐ.ಎ. ವಿಭಾಗದವರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.

    ಇದು ಒದ್ದರೆ ಕತ್ತೆಯೂ ನಾಚಬೇಕು… ತೂಕ ಮಾಡಿದರೆ ಆನೆಯೇ ತಲೆತಗ್ಗಿಸಬೇಕು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts